<p><strong>ಬೆಂಗಳೂರು</strong>: ವಾಣಿಜ್ಯ ಬಳಕೆ ಎಲ್ಪಿಜಿ ಬೆಲೆ ಏರಿಕೆ ಬೆನ್ನಲ್ಲೇ ನಗರದ ಹಲವು ಹೋಟೆಲ್, ರೆಸ್ಟೋರೆಂಟ್ಗಳು ತಿಂಡಿ, ಊಟದ ದರವನ್ನೂ ಹೆಚ್ಚಿಸಿವೆ. ನಷ್ಟ ಸರಿದೂಗಿಸಲು ಹಲವು ಹೋಟೆಲ್ಗಳಲ್ಲಿ (ತಿನಿಸುಗಳ ಬೆಲೆಯಲ್ಲಿ ಕನಿಷ್ಠ ₹5ರಿಂದ ₹10 ಹೆಚ್ಚಳ) ಹೊಸ ದರ ಜಾರಿಗೆ ಬಂದಿದ್ದು, ಇದರಿಂದ ಗ್ರಾಹಕರ ಕಿಸೆಗೆ ಕತ್ತರಿ ಬಿದ್ದಿದೆ.</p>.<p>ಕೇಂದ್ರ ಸರ್ಕಾರ 60 ದಿನದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ₹1,308 ಏರಿಕೆ ಮಾಡಿದೆ. ಅನಿಲ ಪೂರೈಕೆ ಸಮಸ್ಯೆಯಾದ ಬಳಿಕ ಹೋಟೆಲ್ ಉದ್ಯಮ ಸಂಷ್ಟದಲ್ಲಿದೆ.</p>.<p>ಒಂದೆಡೆ ತಿನಿಸುಗಳ ದರವನ್ನು ಹೆಚ್ಚಿಸಿದರೆ ಗ್ರಾಹಕರು ಬರುವುದಿಲ್ಲ. ಮತ್ತೊಂದೆಡೆ ದರ ಏರಿಸದಿದ್ದರೆ ಮಾಲೀಕರಿಗೆ ನಷ್ಟ. ಈ ಇಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಅನೇಕ ಹೋಟೆಲ್ ಮಾಲೀಕರು ಕಂಗಾಲಾಗಿದ್ದು, ನಷ್ಟದಲ್ಲಿರುವ ಕೆಲ ಹೋಟೆಲ್ಗಳು ಮುಚ್ಚುವ ಹಂತದಲ್ಲಿವೆ.</p>.<p>ನಗರದಲ್ಲಿ ವಾಣಿಜ್ಯ ಸಿಲಿಂಡರ್ ದರ ₹3,152. ಎಲ್ಪಿಜಿ ದರ ಭಾರಿ ಏರಿಕೆಯಿಂದ ಹೋಟೆಲ್, ರೆಸ್ಟೋರೆಂಟ್, ರಸ್ತೆ ಬದಿ ತಿಂಡಿ ಮಳಿಗೆ, ಕೇಟರಿಂಗ್ ವಲಯಗಳಿಗೆ ಹೊಡೆತ ಬಿದ್ದಿದೆ. ಈ ಹೊರೆಯನ್ನು ಬೆಲೆ ಹೆಚ್ಚಳದ ಮೂಲಕ ಗ್ರಾಹಕರಿಗೆ ವರ್ಗಾಯಿಸಲಾಗಿದೆ.</p>.<p>ಮೊದಲು ಎಲ್ಪಿಜಿ ಅಭಾವದ ಕಾರಣ ತಿನಿಸುಗಳ ಬೆಲೆ ಏರಿಕೆ ಮಾಡಿದ್ದ ಹೋಟೆಲ್ಗಳು ಇದೀಗ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಪರಿಣಾಮ ಖಾದ್ಯಗಳ ದರವನ್ನು ಜಾಸ್ತಿ ಮಾಡಿವೆ. ಕಾಫಿ ಮತ್ತು ತಿಂಡಿಯ ದರವನ್ನು ₹3ರಿಂದ ₹5 ಏರಿಸಿವೆ. ಇಡ್ಲಿ ₹20ರಿಂದ ₹40ರವರೆಗೂ ಏರಿಕೆಯಾಗಿದೆ. ಊಟದ ದರವನ್ನು ₹10ರಿಂದ ₹20 ರವರೆಗೆ ಹೆಚ್ಚಿಸಲಾಗಿದೆ. ಎರಡು ಪೂರಿ ₹100, ಪುಳಿಯೋಗರೆ ₹80, ಎರಡು ಚಪಾತಿಗೆ ₹70 ಪಡೆಯಲಾಗುತ್ತಿದೆ.</p>.<p>ಮಸಾಲೆ ದೋಸೆ ದರ ₹100 ತಲುಪಿದೆ. ಕಾಫಿ, ಟೀಗೆ ಕೆಲವೆಡೆ ₹15 ರಿಂದ ₹18, ಮತ್ತೆ ಕೆಲವೆಡೆ 20 ರವರೆಗೂ ಹೆಚ್ಚಿಸಲಾಗಿದೆ. ದರ್ಶನಿ, ಫಾಸ್ಟ್ಪುಡ್ಗಳಲ್ಲಿ ಊಟವನ್ನು ₹90ಕ್ಕೆ ಏರಿಕೆ ಮಾಡಲಾಗಿದೆ.</p>.<p>ಅಲ್ಲದೇ ಮಾಂಸಾಹಾರ ಖಾದ್ಯಗಳ ದರದಲ್ಲೂ ಏರಿಕೆಯಾಗಿದ್ದು, ಚಿಕನ್ ಬಿರಿಯಾನಿ ದರವು ಬೀದಿಬದಿ ಹೋಟೆಲ್ಗಳಲ್ಲಿ ₹130 ರಿಂದ ₹150ಕ್ಕೆ ಹೆಚ್ಚಿಸಲಾಗಿದೆ. ಪಾರ್ಸೆಲ್ ಪ್ರತಿ ಐಟಂಗೆ ₹10ಕ್ಕೆ ಏರಿಕೆಯಾಗಿದೆ.</p>.<p>ಹವಾ ನಿಯಂತ್ರಿತ ಸೌಲಭ್ಯ ಹೊಂದಿರುವ ಹೋಟೆಲ್ಗಳು ಕಾಫಿ, ಟೀದರವನ್ನು ₹10 ಹಾಗೂ ಊಟ, ಉಪಾಹಾರದ ಮೇಲೆ ₹20ರಿಂದ ₹30 ಹೆಚ್ಚಳ ಮಾಡಿವೆ. ಮಧ್ಯಮ ಪ್ರಮಾಣದ ಕೆಲ ಹೋಟೆಲ್ಗಳು ಗ್ರಾಹಕರ ಸಂಖ್ಯೆಯಲ್ಲಿ ಇಳಿಕೆಯಾಗುವ ಭಯದಿಂದ ದರ ಹೆಚ್ಚಳಕ್ಕೆ ಹಿಂದೇಟು ಹಾಕುತ್ತಿವೆ.</p>.<p>‘ಪಶ್ಚಿಮ ಏಷ್ಯಾ ಬಿಕ್ಕಟ್ಟು ಆರಂಭವಾದಾಗಿನಿಂದ ಹೋಟೆಲ್ ಉದ್ಯಮ ಸಂಕಷ್ಟದಲ್ಲಿದೆ. ಇದನ್ನೇ ನಂಬಿಕೊಂಡು ನಿತ್ಯ ಲಕ್ಷಾಂತರ ಗ್ರಾಹಕರು ನಗರದಲ್ಲಿ ಜೀವನ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಸಿಲಿಂಡರ್ ದರವನ್ನು ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಿಸುವ ಬದಲು ಗ್ರಾಹಕರು, ಹೋಟೆಲ್ ಉದ್ಯಮವನ್ನು ಗಮನದಲ್ಲಿಟ್ಟುಕೊಂಡು ಅಲ್ಪ ಪ್ರಮಾಣದಲ್ಲಿ ಹೆಚ್ಚಿಸಬೇಕಿತ್ತು. ಅಗತ್ಯವಿರುವಷ್ಟು ಸಿಲಿಂಡರ್ ಸಿಗುತ್ತಿಲ್ಲ. ಇದರಿಂದಾಗಿ ಅನಿವಾರ್ಯವಾಗಿ ಕಾಳಸಂತೆಯಲ್ಲಿ ಸಿಲಿಂಡರ್ಗೆ ₹5 ಸಾವಿರ ಕೊಟ್ಟು ಖರೀದಿಸಬೇಕಿದೆ’ ಎನ್ನುತ್ತಾರೆ ಹೋಟೆಲ್ ಮಾಲೀಕರು.</p>.<p>‘ಸಣ್ಣ ಹೋಟೆಲ್ಗಳು ಮತ್ತು ಬೀದಿ ಬದಿಯ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದು, ಮುಚ್ಚುವ ಭೀತಿಯಲ್ಲಿದ್ದಾರೆ. ಆಹಾರದ ದರಗಳು ಹೆಚ್ಚಾಗುವುದರಿಂದ ಪ್ರವಾಸಿಗರಿಗೂ ಹೊರೆಯಾಗಲಿದೆ ಮತ್ತು ವ್ಯಾಪಾರ ಕುಂಠಿತ ಗೊಳ್ಳಲಿದೆ. ಇದೇ ರೀತಿ ಸಿಲಿಂಡರ್ ದರ ಹೆಚ್ಚಳವಾದರೆ ಹೋಟೆಲ್ ನಡೆಸುವುದು ಹೇಗೆ’ ಎಂದು ಫಾಸ್ಟ್ಪುಡ್ ವ್ಯಾಪಾರಿ ರಮೇಶ್ ಬೇಸರ ವ್ಯಕ್ತಪಡಿಸಿದರು.</p>.<div><blockquote>ವಾಣಿಜ್ಯ ಬಳಕೆಯ 19 ಕೆ.ಜಿ. ಸಿಲಿಂಡರ್ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯನ್ನು ಶೇಕಡ 18 ರಿಂದ ಶೇಕಡ 5ಕ್ಕೆ ಇಳಿಸುವ ಮೂಲಕ ಹೋಟೆಲ್ ಉದ್ಯಮ ರಕ್ಷಿಸಬೇಕು </blockquote><span class="attribution">ಜಿ.ಕೆ.ಶೆಟ್ಟಿ, ರಾಜ್ಯ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ</span></div>. <p><strong>ಹೋಟೆಲ್ ನಡೆಸುವುದೇ ಕಷ್ಟ..</strong></p><p>‘ಮೊದಲು ಯುದ್ಧದ ನೆಪ ಹೇಳಿ ಸಿಲಿಂಡರ್ ದರ ಹೆಚ್ಚಳ ಮಾಡಲಾಯಿತು. ಈಗ ಯಾವ ಕಾರಣಕ್ಕೆ ಹೆಚ್ಚಿಸಲಾಗಿದೆ. ಚುನಾವಣೆಗೂ ಮುನ್ನ ಸಿಲಿಂಡರ್ ದರ ಹೆಚ್ಚಳ ಮಾಡುವುದಿಲ್ಲ ಎಂದು ಹೇಳಿದ್ದ ಕೇಂದ್ರ ಸರ್ಕಾರ, ಪಂಚ ರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ದಿಢೀರ್ ₹993 ಹೆಚ್ಚಳ ಮಾಡಿದೆ. ಈ ರೀತಿಯಾದರೆ ಹೋಟೆಲ್ ನಡೆಸುವುದು ಕಷ್ಟವಾಗುತ್ತದೆ. ವಿದ್ಯುತ್ ಬಿಲ್, ಕಾರ್ಮಿಕರ ಸಂಬಳ, ಬಾಡಿಗೆಗೆ ಸಾಕಷ್ಟು ಖರ್ಚಾಗುತ್ತದೆ’ ಎಂದು ಮಹಾಲಕ್ಷ್ಮೀ ದರ್ಶಿನಿ ಮಾಲೀಕ ಕೃಷ್ಣ ಅಳಲು ತೊಡಿಕೊಂಡರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ವಾಣಿಜ್ಯ ಬಳಕೆ ಎಲ್ಪಿಜಿ ಬೆಲೆ ಏರಿಕೆ ಬೆನ್ನಲ್ಲೇ ನಗರದ ಹಲವು ಹೋಟೆಲ್, ರೆಸ್ಟೋರೆಂಟ್ಗಳು ತಿಂಡಿ, ಊಟದ ದರವನ್ನೂ ಹೆಚ್ಚಿಸಿವೆ. ನಷ್ಟ ಸರಿದೂಗಿಸಲು ಹಲವು ಹೋಟೆಲ್ಗಳಲ್ಲಿ (ತಿನಿಸುಗಳ ಬೆಲೆಯಲ್ಲಿ ಕನಿಷ್ಠ ₹5ರಿಂದ ₹10 ಹೆಚ್ಚಳ) ಹೊಸ ದರ ಜಾರಿಗೆ ಬಂದಿದ್ದು, ಇದರಿಂದ ಗ್ರಾಹಕರ ಕಿಸೆಗೆ ಕತ್ತರಿ ಬಿದ್ದಿದೆ.</p>.<p>ಕೇಂದ್ರ ಸರ್ಕಾರ 60 ದಿನದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ₹1,308 ಏರಿಕೆ ಮಾಡಿದೆ. ಅನಿಲ ಪೂರೈಕೆ ಸಮಸ್ಯೆಯಾದ ಬಳಿಕ ಹೋಟೆಲ್ ಉದ್ಯಮ ಸಂಷ್ಟದಲ್ಲಿದೆ.</p>.<p>ಒಂದೆಡೆ ತಿನಿಸುಗಳ ದರವನ್ನು ಹೆಚ್ಚಿಸಿದರೆ ಗ್ರಾಹಕರು ಬರುವುದಿಲ್ಲ. ಮತ್ತೊಂದೆಡೆ ದರ ಏರಿಸದಿದ್ದರೆ ಮಾಲೀಕರಿಗೆ ನಷ್ಟ. ಈ ಇಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಅನೇಕ ಹೋಟೆಲ್ ಮಾಲೀಕರು ಕಂಗಾಲಾಗಿದ್ದು, ನಷ್ಟದಲ್ಲಿರುವ ಕೆಲ ಹೋಟೆಲ್ಗಳು ಮುಚ್ಚುವ ಹಂತದಲ್ಲಿವೆ.</p>.<p>ನಗರದಲ್ಲಿ ವಾಣಿಜ್ಯ ಸಿಲಿಂಡರ್ ದರ ₹3,152. ಎಲ್ಪಿಜಿ ದರ ಭಾರಿ ಏರಿಕೆಯಿಂದ ಹೋಟೆಲ್, ರೆಸ್ಟೋರೆಂಟ್, ರಸ್ತೆ ಬದಿ ತಿಂಡಿ ಮಳಿಗೆ, ಕೇಟರಿಂಗ್ ವಲಯಗಳಿಗೆ ಹೊಡೆತ ಬಿದ್ದಿದೆ. ಈ ಹೊರೆಯನ್ನು ಬೆಲೆ ಹೆಚ್ಚಳದ ಮೂಲಕ ಗ್ರಾಹಕರಿಗೆ ವರ್ಗಾಯಿಸಲಾಗಿದೆ.</p>.<p>ಮೊದಲು ಎಲ್ಪಿಜಿ ಅಭಾವದ ಕಾರಣ ತಿನಿಸುಗಳ ಬೆಲೆ ಏರಿಕೆ ಮಾಡಿದ್ದ ಹೋಟೆಲ್ಗಳು ಇದೀಗ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಪರಿಣಾಮ ಖಾದ್ಯಗಳ ದರವನ್ನು ಜಾಸ್ತಿ ಮಾಡಿವೆ. ಕಾಫಿ ಮತ್ತು ತಿಂಡಿಯ ದರವನ್ನು ₹3ರಿಂದ ₹5 ಏರಿಸಿವೆ. ಇಡ್ಲಿ ₹20ರಿಂದ ₹40ರವರೆಗೂ ಏರಿಕೆಯಾಗಿದೆ. ಊಟದ ದರವನ್ನು ₹10ರಿಂದ ₹20 ರವರೆಗೆ ಹೆಚ್ಚಿಸಲಾಗಿದೆ. ಎರಡು ಪೂರಿ ₹100, ಪುಳಿಯೋಗರೆ ₹80, ಎರಡು ಚಪಾತಿಗೆ ₹70 ಪಡೆಯಲಾಗುತ್ತಿದೆ.</p>.<p>ಮಸಾಲೆ ದೋಸೆ ದರ ₹100 ತಲುಪಿದೆ. ಕಾಫಿ, ಟೀಗೆ ಕೆಲವೆಡೆ ₹15 ರಿಂದ ₹18, ಮತ್ತೆ ಕೆಲವೆಡೆ 20 ರವರೆಗೂ ಹೆಚ್ಚಿಸಲಾಗಿದೆ. ದರ್ಶನಿ, ಫಾಸ್ಟ್ಪುಡ್ಗಳಲ್ಲಿ ಊಟವನ್ನು ₹90ಕ್ಕೆ ಏರಿಕೆ ಮಾಡಲಾಗಿದೆ.</p>.<p>ಅಲ್ಲದೇ ಮಾಂಸಾಹಾರ ಖಾದ್ಯಗಳ ದರದಲ್ಲೂ ಏರಿಕೆಯಾಗಿದ್ದು, ಚಿಕನ್ ಬಿರಿಯಾನಿ ದರವು ಬೀದಿಬದಿ ಹೋಟೆಲ್ಗಳಲ್ಲಿ ₹130 ರಿಂದ ₹150ಕ್ಕೆ ಹೆಚ್ಚಿಸಲಾಗಿದೆ. ಪಾರ್ಸೆಲ್ ಪ್ರತಿ ಐಟಂಗೆ ₹10ಕ್ಕೆ ಏರಿಕೆಯಾಗಿದೆ.</p>.<p>ಹವಾ ನಿಯಂತ್ರಿತ ಸೌಲಭ್ಯ ಹೊಂದಿರುವ ಹೋಟೆಲ್ಗಳು ಕಾಫಿ, ಟೀದರವನ್ನು ₹10 ಹಾಗೂ ಊಟ, ಉಪಾಹಾರದ ಮೇಲೆ ₹20ರಿಂದ ₹30 ಹೆಚ್ಚಳ ಮಾಡಿವೆ. ಮಧ್ಯಮ ಪ್ರಮಾಣದ ಕೆಲ ಹೋಟೆಲ್ಗಳು ಗ್ರಾಹಕರ ಸಂಖ್ಯೆಯಲ್ಲಿ ಇಳಿಕೆಯಾಗುವ ಭಯದಿಂದ ದರ ಹೆಚ್ಚಳಕ್ಕೆ ಹಿಂದೇಟು ಹಾಕುತ್ತಿವೆ.</p>.<p>‘ಪಶ್ಚಿಮ ಏಷ್ಯಾ ಬಿಕ್ಕಟ್ಟು ಆರಂಭವಾದಾಗಿನಿಂದ ಹೋಟೆಲ್ ಉದ್ಯಮ ಸಂಕಷ್ಟದಲ್ಲಿದೆ. ಇದನ್ನೇ ನಂಬಿಕೊಂಡು ನಿತ್ಯ ಲಕ್ಷಾಂತರ ಗ್ರಾಹಕರು ನಗರದಲ್ಲಿ ಜೀವನ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಸಿಲಿಂಡರ್ ದರವನ್ನು ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಿಸುವ ಬದಲು ಗ್ರಾಹಕರು, ಹೋಟೆಲ್ ಉದ್ಯಮವನ್ನು ಗಮನದಲ್ಲಿಟ್ಟುಕೊಂಡು ಅಲ್ಪ ಪ್ರಮಾಣದಲ್ಲಿ ಹೆಚ್ಚಿಸಬೇಕಿತ್ತು. ಅಗತ್ಯವಿರುವಷ್ಟು ಸಿಲಿಂಡರ್ ಸಿಗುತ್ತಿಲ್ಲ. ಇದರಿಂದಾಗಿ ಅನಿವಾರ್ಯವಾಗಿ ಕಾಳಸಂತೆಯಲ್ಲಿ ಸಿಲಿಂಡರ್ಗೆ ₹5 ಸಾವಿರ ಕೊಟ್ಟು ಖರೀದಿಸಬೇಕಿದೆ’ ಎನ್ನುತ್ತಾರೆ ಹೋಟೆಲ್ ಮಾಲೀಕರು.</p>.<p>‘ಸಣ್ಣ ಹೋಟೆಲ್ಗಳು ಮತ್ತು ಬೀದಿ ಬದಿಯ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದು, ಮುಚ್ಚುವ ಭೀತಿಯಲ್ಲಿದ್ದಾರೆ. ಆಹಾರದ ದರಗಳು ಹೆಚ್ಚಾಗುವುದರಿಂದ ಪ್ರವಾಸಿಗರಿಗೂ ಹೊರೆಯಾಗಲಿದೆ ಮತ್ತು ವ್ಯಾಪಾರ ಕುಂಠಿತ ಗೊಳ್ಳಲಿದೆ. ಇದೇ ರೀತಿ ಸಿಲಿಂಡರ್ ದರ ಹೆಚ್ಚಳವಾದರೆ ಹೋಟೆಲ್ ನಡೆಸುವುದು ಹೇಗೆ’ ಎಂದು ಫಾಸ್ಟ್ಪುಡ್ ವ್ಯಾಪಾರಿ ರಮೇಶ್ ಬೇಸರ ವ್ಯಕ್ತಪಡಿಸಿದರು.</p>.<div><blockquote>ವಾಣಿಜ್ಯ ಬಳಕೆಯ 19 ಕೆ.ಜಿ. ಸಿಲಿಂಡರ್ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯನ್ನು ಶೇಕಡ 18 ರಿಂದ ಶೇಕಡ 5ಕ್ಕೆ ಇಳಿಸುವ ಮೂಲಕ ಹೋಟೆಲ್ ಉದ್ಯಮ ರಕ್ಷಿಸಬೇಕು </blockquote><span class="attribution">ಜಿ.ಕೆ.ಶೆಟ್ಟಿ, ರಾಜ್ಯ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ</span></div>. <p><strong>ಹೋಟೆಲ್ ನಡೆಸುವುದೇ ಕಷ್ಟ..</strong></p><p>‘ಮೊದಲು ಯುದ್ಧದ ನೆಪ ಹೇಳಿ ಸಿಲಿಂಡರ್ ದರ ಹೆಚ್ಚಳ ಮಾಡಲಾಯಿತು. ಈಗ ಯಾವ ಕಾರಣಕ್ಕೆ ಹೆಚ್ಚಿಸಲಾಗಿದೆ. ಚುನಾವಣೆಗೂ ಮುನ್ನ ಸಿಲಿಂಡರ್ ದರ ಹೆಚ್ಚಳ ಮಾಡುವುದಿಲ್ಲ ಎಂದು ಹೇಳಿದ್ದ ಕೇಂದ್ರ ಸರ್ಕಾರ, ಪಂಚ ರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ದಿಢೀರ್ ₹993 ಹೆಚ್ಚಳ ಮಾಡಿದೆ. ಈ ರೀತಿಯಾದರೆ ಹೋಟೆಲ್ ನಡೆಸುವುದು ಕಷ್ಟವಾಗುತ್ತದೆ. ವಿದ್ಯುತ್ ಬಿಲ್, ಕಾರ್ಮಿಕರ ಸಂಬಳ, ಬಾಡಿಗೆಗೆ ಸಾಕಷ್ಟು ಖರ್ಚಾಗುತ್ತದೆ’ ಎಂದು ಮಹಾಲಕ್ಷ್ಮೀ ದರ್ಶಿನಿ ಮಾಲೀಕ ಕೃಷ್ಣ ಅಳಲು ತೊಡಿಕೊಂಡರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>