ಹಾರ್ಪರ್ ಕಾಲಿನ್ಸ್ ಪ್ರಕಾಶನ ಸಂಸ್ಥೆ ಇದನ್ನು ಪ್ರಕಟಿಸಿದ್ದು, ಸ್ನಿಗ್ಧ ಪರುಪುಡಿ ಅವರು ಪುಸ್ತಕ ಬರೆದಿದ್ದಾರೆ. ‘ಟ್ರಸ್ಟ್ ಸ್ಥಾಪಿಸಿದಾಗ ನಮಗೆ ನಮ್ಮ ಸಾಮಾಜಿಕ ಕೆಲಸಗಳು ಯಾವ ರೂಪ ಪಡೆದುಕೊಳ್ಳುತ್ತವೆ ಎಂಬುದರ ಸ್ಪಷ್ಟತೆ ಇರಲಿಲ್ಲ. ಸುಸ್ಥಿರ ಅಭಿವೃದ್ಧಿ ಸಾಧ್ಯವಾಗಿಸಲು ಕೊಡುಗೆ ನೀಡಲು ಬಯಸಿದ್ದೆವು. ನಮ್ಮ ಕೆಲಸವು ಇತರರಿಗೆ ಪ್ರೇರಣೆ ಆಗುತ್ತದೆ ಎಂಬುದು ನನ್ನ ಆಶಯ’ ಎಂದು ವೇಣು ಶ್ರೀನಿವಾಸನ್ ಅವರು ಹೇಳಿದ್ದಾರೆ.