<p><strong>ನವದೆಹಲಿ</strong>: ಮುಂಗಾರು ಹಂಗಾಮಿನಲ್ಲಿ ಫಾಸ್ಪೇಟ್ ಹಾಗೂ ಪೊಟ್ಯಾಸಿಕ್ ರಸಗೊಬ್ಬರಗಳಿಗೆ ₹41,534 ಕೋಟಿ ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. </p>.<p>ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಬ್ಸಿಡಿ ಪ್ರಮಾಣವು ಕಳೆದ ವರ್ಷಕ್ಕಿಂತ ಶೇ 12ರಷ್ಟು ಹೆಚ್ಚಾಗಿದೆ. </p>.<p>ಜೂನ್ ತಿಂಗಳಲ್ಲಿ ನೈಋತ್ಯ ಮುಂಗಾರು ಪ್ರವೇಶದೊಂದಿಗೆ ನಾಟಿ ಕೆಲಸಗಳು ಆರಂಭವಾಗಲಿವೆ. ‘2025ರ ಮುಂಗಾರು ಋತುವಿಗೆ ಹೋಲಿಸಿದರೆ ಸಬ್ಸಿಡಿ ಮೊತ್ತ ₹4,317 ಕೋಟಿ ಹೆಚ್ಚಳ ಆಗಿದೆ’ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗಾರರಿಗೆ ಇಲ್ಲಿ ತಿಳಿಸಿದರು. </p>.<p><strong>ಸಂಪುಟದ ಇತರ ತೀರ್ಮಾನಗಳು: </strong></p>.<ul><li><p>ರಾಜಸ್ಥಾನದ ಜೈಪುರ ಮೆಟ್ರೊ ಎರಡನೇ ಹಂತಕ್ಕೆ ಅನುಮೋದನೆ. ಯೋಜನಾ ಮೊತ್ತ ₹13,037 ಕೋಟಿ. </p></li><li><p>ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ 1,200 ಮೆಗಾವಾಟ್ ಕಲೈ-II ಜಲ ವಿದ್ಯುತ್ ಯೋಜನೆಯ ಅನುಷ್ಠಾನಕ್ಕೆ ₹14,105 ಕೋಟಿ ಹೂಡಿಕೆ ಪ್ರಸ್ತಾವನೆಗೆ ಅನುಮೋದನೆ. </p></li><li><p>ಅರುಣಾಚಲ ಪ್ರದೇಶದ ಕಮ್ಲೆ, ಕ್ರಾದಾಡಿ ಮತ್ತು ಕುರುಂಗ್ ಕುಮೆ ಜಿಲ್ಲೆಗಳಲ್ಲಿ ₹26,069 ಕೋಟಿ ವೆಚ್ಚದಲ್ಲಿ 1,720 ಮೆಗಾವಾಟ್ ಸಾಮರ್ಥ್ಯದ ಕಮಲಾ ಜಲ ವಿದ್ಯುತ್ ಯೋಜನೆ ಕಾರ್ಯಗತಕ್ಕೆ ಒಪ್ಪಿಗೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಮುಂಗಾರು ಹಂಗಾಮಿನಲ್ಲಿ ಫಾಸ್ಪೇಟ್ ಹಾಗೂ ಪೊಟ್ಯಾಸಿಕ್ ರಸಗೊಬ್ಬರಗಳಿಗೆ ₹41,534 ಕೋಟಿ ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. </p>.<p>ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಬ್ಸಿಡಿ ಪ್ರಮಾಣವು ಕಳೆದ ವರ್ಷಕ್ಕಿಂತ ಶೇ 12ರಷ್ಟು ಹೆಚ್ಚಾಗಿದೆ. </p>.<p>ಜೂನ್ ತಿಂಗಳಲ್ಲಿ ನೈಋತ್ಯ ಮುಂಗಾರು ಪ್ರವೇಶದೊಂದಿಗೆ ನಾಟಿ ಕೆಲಸಗಳು ಆರಂಭವಾಗಲಿವೆ. ‘2025ರ ಮುಂಗಾರು ಋತುವಿಗೆ ಹೋಲಿಸಿದರೆ ಸಬ್ಸಿಡಿ ಮೊತ್ತ ₹4,317 ಕೋಟಿ ಹೆಚ್ಚಳ ಆಗಿದೆ’ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗಾರರಿಗೆ ಇಲ್ಲಿ ತಿಳಿಸಿದರು. </p>.<p><strong>ಸಂಪುಟದ ಇತರ ತೀರ್ಮಾನಗಳು: </strong></p>.<ul><li><p>ರಾಜಸ್ಥಾನದ ಜೈಪುರ ಮೆಟ್ರೊ ಎರಡನೇ ಹಂತಕ್ಕೆ ಅನುಮೋದನೆ. ಯೋಜನಾ ಮೊತ್ತ ₹13,037 ಕೋಟಿ. </p></li><li><p>ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ 1,200 ಮೆಗಾವಾಟ್ ಕಲೈ-II ಜಲ ವಿದ್ಯುತ್ ಯೋಜನೆಯ ಅನುಷ್ಠಾನಕ್ಕೆ ₹14,105 ಕೋಟಿ ಹೂಡಿಕೆ ಪ್ರಸ್ತಾವನೆಗೆ ಅನುಮೋದನೆ. </p></li><li><p>ಅರುಣಾಚಲ ಪ್ರದೇಶದ ಕಮ್ಲೆ, ಕ್ರಾದಾಡಿ ಮತ್ತು ಕುರುಂಗ್ ಕುಮೆ ಜಿಲ್ಲೆಗಳಲ್ಲಿ ₹26,069 ಕೋಟಿ ವೆಚ್ಚದಲ್ಲಿ 1,720 ಮೆಗಾವಾಟ್ ಸಾಮರ್ಥ್ಯದ ಕಮಲಾ ಜಲ ವಿದ್ಯುತ್ ಯೋಜನೆ ಕಾರ್ಯಗತಕ್ಕೆ ಒಪ್ಪಿಗೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>