ಬೆಂಗಳೂರು: ಕೆನರಾ ಬ್ಯಾಂಕ್ನ 113ನೆ ಸ್ಥಾಪನಾ ದಿನಾಚರಣೆಯನ್ನು ನಗರದಲ್ಲಿ ಆಚರಿಸಲಾಯಿತು.
ಬ್ಯಾಂಕ್ನ ಅಧ್ಯಕ್ಷ ಟಿ. ಎನ್. ಮನೋಹರನ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಪಿ. ವಿ. ಭಾರತಿ, ಎಂ. ವಿ. ರಾವ್ ಮತ್ತು ದೇಬಶೀಷ್ ಮುಖರ್ಜಿ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್ ಅವರು ಮುಖ್ಯ ಅತಿಥಿಯಾಗಿದ್ದರು.
ಆಲ್ಟಿಕೊ ಕ್ಯಾಪಿಟಲ್ ಹೂಡಿಕೆ
ಬೆಂಗಳೂರು: ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿರುವ ಆಲ್ಟಿಕೊ ಕ್ಯಾಪಿಟಲ್ ಬೆಂಗಳೂರಿನ ವಸತಿ ಯೋಜನೆಯಲ್ಲಿ ₹ 120 ಕೋಟಿ ಹೂಡಿಕೆ ಮಾಡಿದೆ.
ರಿಯಲ್ ಎಸ್ಟೇಟ್ ಕಂಪನಿ ಸೆಂಚೂರಿ ಗ್ರೂಪ್ ಮೂಲಕ ‘ಸೆಂಚೂರಿ ಗ್ರೀನ್ಸ್’ ಯೋಜನೆಯಲ್ಲಿ ಈ ಬಂಡವಾಳ ತೊಡಗಿಸಲಾಗುತ್ತಿದೆ. ₹ 25 ಲಕ್ಷದಿಂದ ₹ 50 ಲಕ್ಷ ವೆಚ್ಚದ ಫ್ಲ್ಯಾಟ್ಗಳನ್ನು ನಿರ್ಮಿಸಲಾಗುತ್ತಿದೆ. 2018 ರ ಅರ್ಧವಾರ್ಷಿಕದಲ್ಲಿ ಬೆಂಗಳೂರಿನ ವಸತಿ ಯೋಜನೆಗಳಿಗೆ ಬೇಡಿಕೆ ಶೇ 11ರಷ್ಟು ಹೆಚ್ಚಾಗಿದೆ.