ಚಿತ್ರಾ, ಎನ್ಎಸ್ಇ ಇನ್ನೊಬ್ಬ ಮಾಜಿ ಸಿಇಒ ರವಿ ನಾರಾಯಣ್ ಮತ್ತು ಮಾಜಿ ಸಿಒಒ ಆನಂದ್ ಸುಬ್ರಮಣಿಯನ್ ಅವರು ದೇಶಬಿಟ್ಟು ತೆರಳದಂತೆ ಸಿಬಿಐ ಲುಕ್ಔಟ್ ಸುತ್ತೋಲೆ ಹೊರಡಿಸಿದೆ. ಷೇರುಗಳನ್ನು ತ್ವರಿತವಾಗಿ ಮಾರಾಟ, ಖರೀದಿ ಮಾಡುವ ಅವಕಾಶವನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಅಡಿಯಲ್ಲಿ ದೆಹಲಿ ಮೂಲದ ಒಪಿಜಿ ಸೆಕ್ಯುರಿಟೀಸ್ ಪ್ರೈ.ಲಿ. ಕಂಪನಿಯ ಮಾಲೀಕ ಸಂಜಯ್ ಗುಪ್ತಾ ಎನ್ನುವವರ ಮೇಲೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.