<p><strong>ನವದೆಹಲಿ</strong>: ಉದ್ಯಮ ವಲಯಕ್ಕೆ ನೆರವು ಒದಗಿಸುವ ಉದ್ದೇಶದಿಂದ ₹2.5 ಲಕ್ಷ ಕೋಟಿ ಮೊತ್ತದ ಸಾಲ ಖಾತರಿ ಯೋಜನೆ ರೂಪಿಸಲು ಕೇಂದ್ರ ಸರ್ಕಾರ ಆಲೋಚಿಸುತ್ತಿದೆ ಎಂದು ಮೂಲಗಳು ಹೇಳಿವೆ.</p>.<p>ಅದರಲ್ಲೂ ಮುಖ್ಯವಾಗಿ ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಕಾರಣದಿಂದಾಗಿ ತೊಂದರೆಗೆ ಒಳಗಾಗಿರುವ ಎಂಎಸ್ಎಂಇ (ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ) ಉದ್ಯಮಗಳಿಗೆ ನೆರವು ನೀಡಲು ಈ ಯೋಜನೆ ಜಾರಿಗೆ ತರುವ ಚಿಂತನೆ ನಡೆದಿದೆ.</p>.<p>ಈ ಯೋಜನೆಯ ಅಡಿಯಲ್ಲಿ, ಅಮೆರಿಕ–ಇರಾನ್ ನಡುವಿನ ಸಂಘರ್ಷದ ಪರಿಣಾಮವಾಗಿ ಉದ್ಯಮಗಳು ಸಾಲ ಮರುಪಾವತಿಯಲ್ಲಿ ವಿಫಲವಾದಲ್ಲಿ ಸಾಲದ ಶೇಕಡ 90ರಷ್ಟು ಮೊತ್ತದವರೆಗಿನ ಅಥವಾ ಗರಿಷ್ಠ ₹100 ಕೋಟಿವರೆಗಿನ ಮೊತ್ತಕ್ಕೆ ಕೇಂದ್ರ ಸರ್ಕಾರವು ಖಾತರಿ ಒದಗಿಸಲಿದೆ.</p>.<p>ಕೇಂದ್ರ ಸರ್ಕಾರದ ಪೂರ್ಣ ಮಾಲೀಕತ್ವದ ‘ರಾಷ್ಟ್ರೀಯ ಸಾಲ ಖಾತರಿ ಟ್ರಸ್ಟಿ ಕಂಪನಿ’ಯು (ಎನ್ಸಿಜಿಟಿಸಿ) ಬ್ಯಾಂಕ್ ಸಾಲಗಳಿಗೆ ಈ ಬಗೆಯ ಖಾತರಿಯನ್ನು ಒದಗಿಸಲಿದೆ. ಯೋಜನೆಗಾಗಿ ಕೇಂದ್ರ ಸರ್ಕಾರವು ಗರಿಷ್ಠ ₹18 ಸಾವಿರ ಕೋಟಿವರೆಗೆ ಹಣ ಒದಗಿಸಬೇಕಾಗುತ್ತದೆ.</p>.<p>ಈ ಯೋಜನೆಯು ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ಬಹಳ ದೊಡ್ಡ ಯಶಸ್ಸು ಸಾಧಿಸಿತ್ತು. ಇದು ವಿವಿಧ ವಲಯಗಳ ಹಲವು ಉದ್ದಿಮೆಗಳು ತಮ್ಮ ಸಾಲ ತೀರಿಸಲು ನೆರವಾಯಿತು ಎಂದು ಮೂಲಗಳು ವಿವರಿಸಿವೆ.</p>.<p>ಕೋವಿಡ್–19 ಸಾಂಕ್ರಾಮಿಕದಿಂದಾಗಿ ತೊಂದರೆಗೆ ಒಳಗಾದ ಉದ್ದಿಮೆಗಳಿಗೆ ಪುನಃ ವಹಿವಾಟು ಆರಂಭಿಸಲು ನೆರವಾಗುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರವು 2020ರ ಮೇ ತಿಂಗಳಲ್ಲಿ ‘ತುರ್ತು ಸಾಲ ಖಾತರಿ ಯೋಜನೆ’ (ಇಸಿಎಲ್ಜಿಎಸ್) ಆರಂಭಿಸಿತು. ಎಂಎಸ್ಎಂಇ ವಲಯದ ಅರ್ಹ ಉದ್ದಿಮೆಗಳಿಗೆ ಇದು ನೆರವು ಒದಗಿಸಿತು.</p>.<p>ಈ ಯೋಜನೆಯು ಅರ್ಥವ್ಯವಸ್ಥೆಯ ಬಹುತೇಕ ಎಲ್ಲ ವಲಯಗಳಿಗೆ ಅನ್ವಯಆಗುವಂತಿತ್ತು. ಯೋಜನೆಯ ಅಡಿಯಲ್ಲಿ ಅರ್ಹ ಉದ್ಯಮಗಳಿಗೆ ನೀಡಿದ ಸಾಲಕ್ಕೆ ಶೇ 100ರಷ್ಟು ಖಾತರಿ ಒದಗಿಸಲಾಗಿತ್ತು.</p>.<p>ಯೋಜನೆಯ ಅಡಿಯಲ್ಲಿ ನೀಡುವ ಸಾಲದ ಬಡ್ಡಿಗೆ ಮಿತಿ ನಿಗದಿ ಮಾಡಲಾಗಿತ್ತು. ಅಲ್ಲದೆ, ಸಾಲದ ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಪ್ರಕ್ರಿಯಾ ಶುಲ್ಕಗಳನ್ನು ಮನ್ನಾ ಮಾಡಲಾಗಿತ್ತು, ಅವಧಿಗೆ ಮೊದಲೇ ಸಾಲ ಮರುಪಾವತಿ ಮಾಡಿದಲ್ಲಿ ಅದಕ್ಕೆ ಶುಲ್ಕ ವಿಧಿಸುತ್ತಿರಲಿಲ್ಲ. ಈ ಯೋಜನೆಯು 2023ರ ಮಾರ್ಚ್ 31ರವರೆಗೆ ಚಾಲ್ತಿಯಲ್ಲಿತ್ತು.</p>.<p>ಅಮೆರಿಕ ಮತ್ತು ಇಸ್ರೇಲ್ ಜೊತೆಯಾಗಿ ಇರಾನ್ ವಿರುದ್ಧ ಸಮರ ಆರಂಭಿಸಿದ ನಂತರದಲ್ಲಿ ಕಚ್ಚಾ ತೈಲದ ಬೆಲೆಯು ಸರಿಸುಮಾರು ಶೇ 50ರಷ್ಟು ಜಾಸ್ತಿಯಾಗಿದೆ. ಹೊರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆಗೆ ಅಡಚಣೆ ಉಂಟಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಉದ್ಯಮ ವಲಯಕ್ಕೆ ನೆರವು ಒದಗಿಸುವ ಉದ್ದೇಶದಿಂದ ₹2.5 ಲಕ್ಷ ಕೋಟಿ ಮೊತ್ತದ ಸಾಲ ಖಾತರಿ ಯೋಜನೆ ರೂಪಿಸಲು ಕೇಂದ್ರ ಸರ್ಕಾರ ಆಲೋಚಿಸುತ್ತಿದೆ ಎಂದು ಮೂಲಗಳು ಹೇಳಿವೆ.</p>.<p>ಅದರಲ್ಲೂ ಮುಖ್ಯವಾಗಿ ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಕಾರಣದಿಂದಾಗಿ ತೊಂದರೆಗೆ ಒಳಗಾಗಿರುವ ಎಂಎಸ್ಎಂಇ (ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ) ಉದ್ಯಮಗಳಿಗೆ ನೆರವು ನೀಡಲು ಈ ಯೋಜನೆ ಜಾರಿಗೆ ತರುವ ಚಿಂತನೆ ನಡೆದಿದೆ.</p>.<p>ಈ ಯೋಜನೆಯ ಅಡಿಯಲ್ಲಿ, ಅಮೆರಿಕ–ಇರಾನ್ ನಡುವಿನ ಸಂಘರ್ಷದ ಪರಿಣಾಮವಾಗಿ ಉದ್ಯಮಗಳು ಸಾಲ ಮರುಪಾವತಿಯಲ್ಲಿ ವಿಫಲವಾದಲ್ಲಿ ಸಾಲದ ಶೇಕಡ 90ರಷ್ಟು ಮೊತ್ತದವರೆಗಿನ ಅಥವಾ ಗರಿಷ್ಠ ₹100 ಕೋಟಿವರೆಗಿನ ಮೊತ್ತಕ್ಕೆ ಕೇಂದ್ರ ಸರ್ಕಾರವು ಖಾತರಿ ಒದಗಿಸಲಿದೆ.</p>.<p>ಕೇಂದ್ರ ಸರ್ಕಾರದ ಪೂರ್ಣ ಮಾಲೀಕತ್ವದ ‘ರಾಷ್ಟ್ರೀಯ ಸಾಲ ಖಾತರಿ ಟ್ರಸ್ಟಿ ಕಂಪನಿ’ಯು (ಎನ್ಸಿಜಿಟಿಸಿ) ಬ್ಯಾಂಕ್ ಸಾಲಗಳಿಗೆ ಈ ಬಗೆಯ ಖಾತರಿಯನ್ನು ಒದಗಿಸಲಿದೆ. ಯೋಜನೆಗಾಗಿ ಕೇಂದ್ರ ಸರ್ಕಾರವು ಗರಿಷ್ಠ ₹18 ಸಾವಿರ ಕೋಟಿವರೆಗೆ ಹಣ ಒದಗಿಸಬೇಕಾಗುತ್ತದೆ.</p>.<p>ಈ ಯೋಜನೆಯು ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ಬಹಳ ದೊಡ್ಡ ಯಶಸ್ಸು ಸಾಧಿಸಿತ್ತು. ಇದು ವಿವಿಧ ವಲಯಗಳ ಹಲವು ಉದ್ದಿಮೆಗಳು ತಮ್ಮ ಸಾಲ ತೀರಿಸಲು ನೆರವಾಯಿತು ಎಂದು ಮೂಲಗಳು ವಿವರಿಸಿವೆ.</p>.<p>ಕೋವಿಡ್–19 ಸಾಂಕ್ರಾಮಿಕದಿಂದಾಗಿ ತೊಂದರೆಗೆ ಒಳಗಾದ ಉದ್ದಿಮೆಗಳಿಗೆ ಪುನಃ ವಹಿವಾಟು ಆರಂಭಿಸಲು ನೆರವಾಗುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರವು 2020ರ ಮೇ ತಿಂಗಳಲ್ಲಿ ‘ತುರ್ತು ಸಾಲ ಖಾತರಿ ಯೋಜನೆ’ (ಇಸಿಎಲ್ಜಿಎಸ್) ಆರಂಭಿಸಿತು. ಎಂಎಸ್ಎಂಇ ವಲಯದ ಅರ್ಹ ಉದ್ದಿಮೆಗಳಿಗೆ ಇದು ನೆರವು ಒದಗಿಸಿತು.</p>.<p>ಈ ಯೋಜನೆಯು ಅರ್ಥವ್ಯವಸ್ಥೆಯ ಬಹುತೇಕ ಎಲ್ಲ ವಲಯಗಳಿಗೆ ಅನ್ವಯಆಗುವಂತಿತ್ತು. ಯೋಜನೆಯ ಅಡಿಯಲ್ಲಿ ಅರ್ಹ ಉದ್ಯಮಗಳಿಗೆ ನೀಡಿದ ಸಾಲಕ್ಕೆ ಶೇ 100ರಷ್ಟು ಖಾತರಿ ಒದಗಿಸಲಾಗಿತ್ತು.</p>.<p>ಯೋಜನೆಯ ಅಡಿಯಲ್ಲಿ ನೀಡುವ ಸಾಲದ ಬಡ್ಡಿಗೆ ಮಿತಿ ನಿಗದಿ ಮಾಡಲಾಗಿತ್ತು. ಅಲ್ಲದೆ, ಸಾಲದ ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಪ್ರಕ್ರಿಯಾ ಶುಲ್ಕಗಳನ್ನು ಮನ್ನಾ ಮಾಡಲಾಗಿತ್ತು, ಅವಧಿಗೆ ಮೊದಲೇ ಸಾಲ ಮರುಪಾವತಿ ಮಾಡಿದಲ್ಲಿ ಅದಕ್ಕೆ ಶುಲ್ಕ ವಿಧಿಸುತ್ತಿರಲಿಲ್ಲ. ಈ ಯೋಜನೆಯು 2023ರ ಮಾರ್ಚ್ 31ರವರೆಗೆ ಚಾಲ್ತಿಯಲ್ಲಿತ್ತು.</p>.<p>ಅಮೆರಿಕ ಮತ್ತು ಇಸ್ರೇಲ್ ಜೊತೆಯಾಗಿ ಇರಾನ್ ವಿರುದ್ಧ ಸಮರ ಆರಂಭಿಸಿದ ನಂತರದಲ್ಲಿ ಕಚ್ಚಾ ತೈಲದ ಬೆಲೆಯು ಸರಿಸುಮಾರು ಶೇ 50ರಷ್ಟು ಜಾಸ್ತಿಯಾಗಿದೆ. ಹೊರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆಗೆ ಅಡಚಣೆ ಉಂಟಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>