ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿರುವ ₹ 1.75 ಲಕ್ಷ ಕೋಟಿ ಕೊಡುಗೆಯಲ್ಲಿ ₹ 73 ಸಾವಿರ ಕೋಟಿ ಮಾತ್ರವೇ ಹೊಸದಾಗಿದ್ದು, ಉಳಿದ ಮೊತ್ತವೆಲ್ಲವೂ ಬಜೆಟ್ನಲ್ಲಿಯೇ ಘೋಷಿಸಿದ್ದಾಗಿದೆ. ಹೀಗಾಗಿ ಸದ್ಯದ ಬಿಕ್ಕಟ್ಟನ್ನು ಎದುರಿಸಲು ಭಾರಿ ಮೊತ್ತದ ವಿತ್ತೀಯ ಕೊಡುಗೆಯ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.