ಮಂಗಳೂರು: ‘ವರ್ಲ್ಡ್ ಲೀಡರ್ಶಿಪ್ ಕಾಂಗ್ರೆಸ್ ಆ್ಯಂಡ್ ಅವಾರ್ಡ್ಸ್’ ನೀಡುವ ‘ಸಿಇಒ ಆಫ್ ದ ಇಯರ್’ ಪ್ರಶಸ್ತಿಯನ್ನು ಮುಂಬೈನಲ್ಲಿ ನಡೆದ 19ನೇ ‘ಗ್ಲೋಬಲ್ ಎಡಿಷನ್ ಆಫ್ ಬಿಸಿನೆಸ್ ಲೀಡರ್ ಆಫ್ ದ ಇಯರ್’ ಸಮಾರಂಭದಲ್ಲಿ ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್. ಅವರಿಗೆ ಪ್ರದಾನ ಮಾಡಲಾಯಿತು.