<p>ಚಾಮರಾಜನಗರ: ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಏರಿಳಿತ ಕಂಡಿದೆ. ಬೀನ್ಸ್ ಬೆಲೆ ಮತ್ತೆ ಹೆಚ್ಚಾದರೆ, ನುಗ್ಗೆ ಬೆಲೆ ಕುಸಿತ ಕಂಡಿದೆ. ಬೇಸಿಗೆಯ ಧಗೆಗೆ ತಂಪುಪಾನೀಯ ಹಾಗೂ ಹಣ್ಣುಗಳ ದರ ಹೆಚ್ಚಾಗಿದ್ದು ಗ್ರಾಹಕರ ಜೇಬಿಗೆ ಭಾರವಾಗಿದೆ.</p>.<p>ಕಳೆದ ವಾರ ಬೀನ್ಸ್ ದರ ₹ 50ಕ್ಕೆ ಇಳಿಕೆಯಾಗಿತ್ತು. ಈ ವಾರ ದರ ಏರುಮುಖವಾಗಿದ್ದು ಕೆ.ಜಿಗೆ ₹80 ಮುಟ್ಟಿದೆ. ಇಳುವರಿ ಕುಸಿತ, ಬೇಡಿಕೆಯ ಪರಿಣಾಮ ಬೆಲೆ ಏರಿಳಿತವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.</p>.<p>ಮಾರುಕಟ್ಟೆಗೆ ನುಗ್ಗೆ ಪೂರೈಕೆ ಹೆಚ್ಚಾಗಿರುವುದರಿಂದ ದರ ಇಳಿಮುಖವಾಗಿದೆ. ತಿಂಗಳ ಹಿಂದೆ ಕೆ.ಜಿಗೆ ಗರಿಷ್ಠ ₹ 200 ತಲುಪಿದ್ದ ನುಗ್ಗೆ ಪ್ರಸ್ತುತ ₹50ಕ್ಕೆ ಕುಸಿತ ಕಂಡಿದೆ. ಸದಾ ಗಗನಮುಖಿಯಾಗುತ್ತಿದ್ದ ನುಗ್ಗೆ ಬೆಲೆ ಇಳಿದಿರುವದರಿಂದ ಗ್ರಾಹಕರು ಖರೀದಿಗೆ ಉತ್ಸಾಹ ತೋರುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಿ ಮಹದೇವಪ್ಪ.</p>.<p>ಕ್ಯಾರೆಟ್ ದರ ಕುಸಿತ: ಸಾಂಬಾರ್, ಪಲ್ಯ ಹಾಗೂ ಸಿಹಿ ಪದಾರ್ಥಗಳ ತಯಾರಿಕೆಗೆ ಹೆಚ್ಚು ಬಳಕೆಯಾಗುವ ಕ್ಯಾರೆಟ್ ಬೆಲೆ ತೀವ್ರ ಕುಸಿತ ಕಂಡಿದೆ. ಒಂದು ತಿಂಗಳಿನಿಂದಲೂ ದರ ಕೆ.ಜಿಗೆ ₹ 20 ರಿಂದ ₹ 30ರ ಆಸುಪಾಸಿನಲ್ಲಿದೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಕ್ಯಾರೆಟ್ ಪೂರೈಕೆ ಹೆಚ್ಚಾಗಿರುವುದು ಬೆಲೆ ಇಳಿಕೆಗೆ ಪ್ರಮುಖ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.</p>.<p>ಟೊಮೆಟೊ ಅಗ್ಗ: ಟೊಮೆಟೊ ದರ ಕೂಡ ಅಗ್ಗವಾಗಿದ್ದು ಗುಣಮಟ್ಟ ಹಾಗೂ ಗಾತ್ರದ ಆಧಾರದ ಮೇಲೆ ಕೆ.ಜಿಗೆ ₹10 ರಿಂದ ₹20ಕ್ಕೆ ಸಿಗುತ್ತಿದೆ. ಟೊಮೆಟೊ ಬೆಳೆ ವಿಸ್ತರಣೆ, ಉತ್ತಮ ಇಳುವರಿ, ಬೇಡಿಕೆಗಿಂತ ಹೆಚ್ಚು ಪೂರೈಕೆಯಾಗಿರುವುದರಿಂದ ದರ ಕನಿಷ್ಠಮಟ್ಟಕ್ಕೆ ಕುಸಿದಿದೆ. ಒಂದು ತಿಂಗಳಿನಿಂದಲೂ ದರ ಬಹುತೇಕ ಸ್ಥಿರವಾಗಿದೆ.</p>.<p>ಬೆಳ್ಳುಳ್ಳಿ ದುಬಾರಿ: ಮಸಾಲೆ ಪದಾರ್ಥಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಬೆಳ್ಳುಳ್ಳಿ ದರ ಹೆಚ್ಚಾಗಿದೆ. ದಪ್ಪ ಎಸಳುಗಳುಳ್ಳ ಬೆಳ್ಳುಳ್ಳಿ ಗಡ್ಡೆಗಳಿಗೆ ಕೆ.ಜಿಗೆ ₹200ರವರೆಗೆ ದರ ಇದ್ದರೆ, ಸಣ್ಣ ಹಾಗೂ ಮಧ್ಯಮಗಾತ್ರದ ಗಡ್ಡೆಗಳಿಗೆ ₹140 ರಿಂದ ₹160ರವರೆಗೆ ಬೆಲೆ ಇದೆ. ಬೆಳ್ಳುಳ್ಳಿ ಏರುಗತಿಯಲ್ಲಿದ್ದರೆ ಈರುಳ್ಳಿ ಮಾತ್ರ ಇಳಿಮುಖವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ ಕೆ.ಜಿಗೆ ₹20 ರಿಂದ ₹25ಕ್ಕೆ ದೊರೆಯುತ್ತಿದೆ. ಸಾಂಬಾರ್ ಈರುಳ್ಳಿ (ಸಣ್ಣ ಈರುಳ್ಳಿ) ದರವೂ ಕುಸಿದಿದ್ದು ಕೆ.ಜಿಗೆ ₹25 ರಿಂದ ₹30ರವರೆಗೆ ಇದೆ.</p>.<p>ಹಣ್ಣಿಗೆ ಭಾರಿ ಡಿಮ್ಯಾಂಡ್: ಬಿಸಿಲಿನ ಧಗೆ ಹೆಚ್ಚುತ್ತಿದ್ದಂತೆ ಹಣ್ಣುಗಳಿಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ತಂಪು ಪಾನೀಯಗಳ ತಯಾರಿಕೆಗೆ ಪ್ರಮುಖವಾಗಿ ಬಳಸುವ ಕಲ್ಲಂಗಡಿ, ಕರಬೂಜ, ಅನಾನಸು, ಕಪ್ಪು ದ್ರಾಕ್ಷಿ, ಮೋಸಂಬಿ, ಕಿತ್ತಳೆ ಹಣ್ಣಿಗೆ ಬೇಡಿಕೆ ಸೃಷ್ಟಿಯಾಗಿದೆ. ಕಲ್ಲಂಗಡಿ ಕೆ.ಜಿಗೆ ₹25 ರಿಂದ ₹30 ಇದ್ದರೆ, ಕಪ್ಪು ದ್ರಾಕ್ಷಿ ₹220 ರಿಂದ ₹260, ಹಸಿರು ದ್ರಾಕ್ಷಿ ₹160 ರಿಂದ ₹180, ಅನಾನಸಿಗೆ ಕೆ.ಜಿಗೆ ₹50 ರಿಂದ ₹80, ಕಿತ್ತಳೆ ₹80 ರಿಂದ ₹100, ಕರಬೂಜ ₹40ರಿಂದ ₹50ರ ಆಸುಪಾಸಿನಲ್ಲಿದೆ. ಬಾಳೆ ಹಣ್ಣಿನ ದರ ಇಳಿಕೆಯಾಗಿದ್ದು ಕೆ.ಜಿಗೆ ₹50 ರಿಂದ ₹60ರವರೆಗೆ ಇದೆ.</p>.<p>ಎಳನೀರಿಗೂ ಬೇಡಿಕೆ ಹೆಚ್ಚಾಗಿದ್ದು ದರ ಒಂದಕ್ಕೆ ₹60ಕ್ಕೆ ಜಿಗಿದಿದೆ. ನಗರದ ಬೈಪಾಸ್ ರಸ್ತೆ, ವೃತ್ತ, ಆಸ್ಪತ್ರೆ, ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳ ಬಳಿ ವ್ಯಾಪಾರ ಜೋರಾಗಿ ನಡೆದಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260331-37-924200344</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಾಮರಾಜನಗರ: ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಏರಿಳಿತ ಕಂಡಿದೆ. ಬೀನ್ಸ್ ಬೆಲೆ ಮತ್ತೆ ಹೆಚ್ಚಾದರೆ, ನುಗ್ಗೆ ಬೆಲೆ ಕುಸಿತ ಕಂಡಿದೆ. ಬೇಸಿಗೆಯ ಧಗೆಗೆ ತಂಪುಪಾನೀಯ ಹಾಗೂ ಹಣ್ಣುಗಳ ದರ ಹೆಚ್ಚಾಗಿದ್ದು ಗ್ರಾಹಕರ ಜೇಬಿಗೆ ಭಾರವಾಗಿದೆ.</p>.<p>ಕಳೆದ ವಾರ ಬೀನ್ಸ್ ದರ ₹ 50ಕ್ಕೆ ಇಳಿಕೆಯಾಗಿತ್ತು. ಈ ವಾರ ದರ ಏರುಮುಖವಾಗಿದ್ದು ಕೆ.ಜಿಗೆ ₹80 ಮುಟ್ಟಿದೆ. ಇಳುವರಿ ಕುಸಿತ, ಬೇಡಿಕೆಯ ಪರಿಣಾಮ ಬೆಲೆ ಏರಿಳಿತವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.</p>.<p>ಮಾರುಕಟ್ಟೆಗೆ ನುಗ್ಗೆ ಪೂರೈಕೆ ಹೆಚ್ಚಾಗಿರುವುದರಿಂದ ದರ ಇಳಿಮುಖವಾಗಿದೆ. ತಿಂಗಳ ಹಿಂದೆ ಕೆ.ಜಿಗೆ ಗರಿಷ್ಠ ₹ 200 ತಲುಪಿದ್ದ ನುಗ್ಗೆ ಪ್ರಸ್ತುತ ₹50ಕ್ಕೆ ಕುಸಿತ ಕಂಡಿದೆ. ಸದಾ ಗಗನಮುಖಿಯಾಗುತ್ತಿದ್ದ ನುಗ್ಗೆ ಬೆಲೆ ಇಳಿದಿರುವದರಿಂದ ಗ್ರಾಹಕರು ಖರೀದಿಗೆ ಉತ್ಸಾಹ ತೋರುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಿ ಮಹದೇವಪ್ಪ.</p>.<p>ಕ್ಯಾರೆಟ್ ದರ ಕುಸಿತ: ಸಾಂಬಾರ್, ಪಲ್ಯ ಹಾಗೂ ಸಿಹಿ ಪದಾರ್ಥಗಳ ತಯಾರಿಕೆಗೆ ಹೆಚ್ಚು ಬಳಕೆಯಾಗುವ ಕ್ಯಾರೆಟ್ ಬೆಲೆ ತೀವ್ರ ಕುಸಿತ ಕಂಡಿದೆ. ಒಂದು ತಿಂಗಳಿನಿಂದಲೂ ದರ ಕೆ.ಜಿಗೆ ₹ 20 ರಿಂದ ₹ 30ರ ಆಸುಪಾಸಿನಲ್ಲಿದೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಕ್ಯಾರೆಟ್ ಪೂರೈಕೆ ಹೆಚ್ಚಾಗಿರುವುದು ಬೆಲೆ ಇಳಿಕೆಗೆ ಪ್ರಮುಖ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.</p>.<p>ಟೊಮೆಟೊ ಅಗ್ಗ: ಟೊಮೆಟೊ ದರ ಕೂಡ ಅಗ್ಗವಾಗಿದ್ದು ಗುಣಮಟ್ಟ ಹಾಗೂ ಗಾತ್ರದ ಆಧಾರದ ಮೇಲೆ ಕೆ.ಜಿಗೆ ₹10 ರಿಂದ ₹20ಕ್ಕೆ ಸಿಗುತ್ತಿದೆ. ಟೊಮೆಟೊ ಬೆಳೆ ವಿಸ್ತರಣೆ, ಉತ್ತಮ ಇಳುವರಿ, ಬೇಡಿಕೆಗಿಂತ ಹೆಚ್ಚು ಪೂರೈಕೆಯಾಗಿರುವುದರಿಂದ ದರ ಕನಿಷ್ಠಮಟ್ಟಕ್ಕೆ ಕುಸಿದಿದೆ. ಒಂದು ತಿಂಗಳಿನಿಂದಲೂ ದರ ಬಹುತೇಕ ಸ್ಥಿರವಾಗಿದೆ.</p>.<p>ಬೆಳ್ಳುಳ್ಳಿ ದುಬಾರಿ: ಮಸಾಲೆ ಪದಾರ್ಥಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಬೆಳ್ಳುಳ್ಳಿ ದರ ಹೆಚ್ಚಾಗಿದೆ. ದಪ್ಪ ಎಸಳುಗಳುಳ್ಳ ಬೆಳ್ಳುಳ್ಳಿ ಗಡ್ಡೆಗಳಿಗೆ ಕೆ.ಜಿಗೆ ₹200ರವರೆಗೆ ದರ ಇದ್ದರೆ, ಸಣ್ಣ ಹಾಗೂ ಮಧ್ಯಮಗಾತ್ರದ ಗಡ್ಡೆಗಳಿಗೆ ₹140 ರಿಂದ ₹160ರವರೆಗೆ ಬೆಲೆ ಇದೆ. ಬೆಳ್ಳುಳ್ಳಿ ಏರುಗತಿಯಲ್ಲಿದ್ದರೆ ಈರುಳ್ಳಿ ಮಾತ್ರ ಇಳಿಮುಖವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ ಕೆ.ಜಿಗೆ ₹20 ರಿಂದ ₹25ಕ್ಕೆ ದೊರೆಯುತ್ತಿದೆ. ಸಾಂಬಾರ್ ಈರುಳ್ಳಿ (ಸಣ್ಣ ಈರುಳ್ಳಿ) ದರವೂ ಕುಸಿದಿದ್ದು ಕೆ.ಜಿಗೆ ₹25 ರಿಂದ ₹30ರವರೆಗೆ ಇದೆ.</p>.<p>ಹಣ್ಣಿಗೆ ಭಾರಿ ಡಿಮ್ಯಾಂಡ್: ಬಿಸಿಲಿನ ಧಗೆ ಹೆಚ್ಚುತ್ತಿದ್ದಂತೆ ಹಣ್ಣುಗಳಿಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ತಂಪು ಪಾನೀಯಗಳ ತಯಾರಿಕೆಗೆ ಪ್ರಮುಖವಾಗಿ ಬಳಸುವ ಕಲ್ಲಂಗಡಿ, ಕರಬೂಜ, ಅನಾನಸು, ಕಪ್ಪು ದ್ರಾಕ್ಷಿ, ಮೋಸಂಬಿ, ಕಿತ್ತಳೆ ಹಣ್ಣಿಗೆ ಬೇಡಿಕೆ ಸೃಷ್ಟಿಯಾಗಿದೆ. ಕಲ್ಲಂಗಡಿ ಕೆ.ಜಿಗೆ ₹25 ರಿಂದ ₹30 ಇದ್ದರೆ, ಕಪ್ಪು ದ್ರಾಕ್ಷಿ ₹220 ರಿಂದ ₹260, ಹಸಿರು ದ್ರಾಕ್ಷಿ ₹160 ರಿಂದ ₹180, ಅನಾನಸಿಗೆ ಕೆ.ಜಿಗೆ ₹50 ರಿಂದ ₹80, ಕಿತ್ತಳೆ ₹80 ರಿಂದ ₹100, ಕರಬೂಜ ₹40ರಿಂದ ₹50ರ ಆಸುಪಾಸಿನಲ್ಲಿದೆ. ಬಾಳೆ ಹಣ್ಣಿನ ದರ ಇಳಿಕೆಯಾಗಿದ್ದು ಕೆ.ಜಿಗೆ ₹50 ರಿಂದ ₹60ರವರೆಗೆ ಇದೆ.</p>.<p>ಎಳನೀರಿಗೂ ಬೇಡಿಕೆ ಹೆಚ್ಚಾಗಿದ್ದು ದರ ಒಂದಕ್ಕೆ ₹60ಕ್ಕೆ ಜಿಗಿದಿದೆ. ನಗರದ ಬೈಪಾಸ್ ರಸ್ತೆ, ವೃತ್ತ, ಆಸ್ಪತ್ರೆ, ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳ ಬಳಿ ವ್ಯಾಪಾರ ಜೋರಾಗಿ ನಡೆದಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260331-37-924200344</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>