ಬೆಂಗಳೂರು: ಚಂದ್ರು ಅಯ್ಯರ್ ಅವರನ್ನು ಕರ್ನಾಟಕ ಮತ್ತು ಕೇರಳದ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಹಾಗೂ ದಕ್ಷಿಣ ಏಷ್ಯಾಕ್ಕೆ ಬ್ರಿಟನ್ನಿನ ಡೆಪ್ಯುಟಿ ಟ್ರೇಡ್ ಕಮಿಷನರ್ (ಹೂಡಿಕೆ) ಆಗಿ ನೇಮಕ ಮಾಡಲಾಗಿದೆ.
ಕರ್ನಾಟಕ ಮತ್ತು ಕೇರಳ ರಾಜ್ಯಗಳ ಜೊತೆ ಬ್ರಿಟನ್ನಿನ ಸಂಬಂಧ ಹೆಚ್ಚಿಸುವುದು, ಈ ರಾಜ್ಯಗಳ ಜೊತೆ ವಾಣಿಜ್ಯೋದ್ಯಮಿಗಳ ಹಾಗೂ ಸಾರ್ವಜನಿಕರ ಒಡನಾಟ ಹೆಚ್ಚಿಸುವುದು ಅವರ ಹೊಣೆಗಾರಿಕೆ ಆಗಿರಲಿದೆ ಎಂದು ಪ್ರಕಟಣೆ ತಿಳಿಸಿದೆ.
ಅಲ್ಲದೆ, ಭಾರತದಿಂದ ಆಗುವ ವಿದೇಶಿ ನೇರ ಬಂಡವಾಳ ಹೂಡಿಕೆಗಳು ಬ್ರಿಟನ್ ಕಡೆ ಸಾಗುವಂತೆ ಮಾಡುವ ಜವಾಬ್ದಾರಿಯೂ ಅವರ ಮೇಲೆ ಇರಲಿದೆ.