<p>ಚಿಕ್ಕೋಡಿ: ಪಟ್ಟಣದ ಶ್ರೀ ಶಾಂತಪ್ಪಣ್ಣಾ ಮಿರಜಿ ಅರ್ಬನ್ ಕೋ– ಆಪ್ ಬ್ಯಾಂಕ್ 2025–26ನೇ ವರ್ಷಾಂತ್ಯಕ್ಕೆ ₹ 2.34 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಭಾತೆ ಹೇಳಿದರು.</p>.<p>ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಿ.ಶಾಂತಪ್ಪಣ್ಣಾ ಮಿರಜಿ ಅವರು ಹುಟ್ಟು ಹಾಕಿದ ಈ ಸಂಸ್ಥೆಯು ಜನಸಾಮಾನ್ಯರ ಆರ್ಥಿಕ ಸ್ಥಿತಿಗತಿಯನ್ನು ಸುಧಾರಣೆ ಮಾಡುತ್ತಲೇ ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ಸಾಗುತ್ತಿದೆ. ಸಂಸ್ಥೆಯು 13,562 ಸದಸ್ಯರನ್ನು ಹೊಂದಿದ್ದು, ₹ 10.05 ಕೋಟಿ ಷೇರು ಬಂಡವಾಳ ಹೊಂದಿದೆ. ₹ 55 ಕೋಟಿ ಸ್ವಂತ ನಿಧಿ ಇದ್ದು, ₹ 294.75 ಕೋಟಿ ಠೇವು ಸಂಗ್ರಹಿಸಿದೆ. ₹ 178.23 ಕೋಟಿ ಸಾಲ ವಿತರಿಸಲಾಗಿದ್ದು, ಸಾಲ ವಸೂಲಾತಿ ಪ್ರಮಾಣ ಶೇ 96ರಷ್ಟಿದೆ. ಒಟ್ಟು ಗುಂತಾವಣೆ ₹ 155.52 ಕೋಟಿ, ₹ 2.34 ಕೋಟಿ ನಿವ್ವಳ ಲಾಭ ಹೊಂದಿದೆ’ ಎಂದರು.</p>.<p>ನಿರ್ದೇಶಕರಾದ ಮಹಾವೀರ ಮಿರಜಿ, ಅಶೋಕ ದಾನವಾಡೆ, ಮಹೇಶ ಲಡಗೆ, ಅನಿಲ ಸದಲಗೆ, ಈರಪ್ಪ ಹಂಪಣ್ಣವರ, ಯಶವಂತ ಮಿರಜೆ, ರವಿಕುಮಾರ ರೋಖಡೆ, ಪ್ರದಾನ ವ್ಯವಸ್ಥಾಪಕ ಆರ್.ಎಸ್. ವಂದೂರೆ, ಎಸ್.ಬಿ. ಕೋಟಗಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260420-21-209268266</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕೋಡಿ: ಪಟ್ಟಣದ ಶ್ರೀ ಶಾಂತಪ್ಪಣ್ಣಾ ಮಿರಜಿ ಅರ್ಬನ್ ಕೋ– ಆಪ್ ಬ್ಯಾಂಕ್ 2025–26ನೇ ವರ್ಷಾಂತ್ಯಕ್ಕೆ ₹ 2.34 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಭಾತೆ ಹೇಳಿದರು.</p>.<p>ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಿ.ಶಾಂತಪ್ಪಣ್ಣಾ ಮಿರಜಿ ಅವರು ಹುಟ್ಟು ಹಾಕಿದ ಈ ಸಂಸ್ಥೆಯು ಜನಸಾಮಾನ್ಯರ ಆರ್ಥಿಕ ಸ್ಥಿತಿಗತಿಯನ್ನು ಸುಧಾರಣೆ ಮಾಡುತ್ತಲೇ ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ಸಾಗುತ್ತಿದೆ. ಸಂಸ್ಥೆಯು 13,562 ಸದಸ್ಯರನ್ನು ಹೊಂದಿದ್ದು, ₹ 10.05 ಕೋಟಿ ಷೇರು ಬಂಡವಾಳ ಹೊಂದಿದೆ. ₹ 55 ಕೋಟಿ ಸ್ವಂತ ನಿಧಿ ಇದ್ದು, ₹ 294.75 ಕೋಟಿ ಠೇವು ಸಂಗ್ರಹಿಸಿದೆ. ₹ 178.23 ಕೋಟಿ ಸಾಲ ವಿತರಿಸಲಾಗಿದ್ದು, ಸಾಲ ವಸೂಲಾತಿ ಪ್ರಮಾಣ ಶೇ 96ರಷ್ಟಿದೆ. ಒಟ್ಟು ಗುಂತಾವಣೆ ₹ 155.52 ಕೋಟಿ, ₹ 2.34 ಕೋಟಿ ನಿವ್ವಳ ಲಾಭ ಹೊಂದಿದೆ’ ಎಂದರು.</p>.<p>ನಿರ್ದೇಶಕರಾದ ಮಹಾವೀರ ಮಿರಜಿ, ಅಶೋಕ ದಾನವಾಡೆ, ಮಹೇಶ ಲಡಗೆ, ಅನಿಲ ಸದಲಗೆ, ಈರಪ್ಪ ಹಂಪಣ್ಣವರ, ಯಶವಂತ ಮಿರಜೆ, ರವಿಕುಮಾರ ರೋಖಡೆ, ಪ್ರದಾನ ವ್ಯವಸ್ಥಾಪಕ ಆರ್.ಎಸ್. ವಂದೂರೆ, ಎಸ್.ಬಿ. ಕೋಟಗಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260420-21-209268266</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>