ನವದೆಹಲಿ: ಮುಂಗಾರು ಚುರುಕಾಗಿದ್ದು, ರೈತರು 7.99 ಕೋಟಿ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೊಲಿಸಿದರೆ ಬಿತ್ತನೆ ಪ್ರದೇಶದಲ್ಲಿ ಶೇ 18.3ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಹೇಳಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ6.75 ಕೋಟಿ ಹೆಕ್ಟೇರ್ಗಳಲ್ಲಿ ಬಿತ್ತನೆ ಕಾರ್ಯ ನಡೆದಿತ್ತು.
ರಾಜ್ಯ ಸರ್ಕಾರಗಳು ನೀಡುವ ಮಾಹಿತಿಯ ಆಧಾರದ ಮೇಲೆ ಜೂನ್ 24ರವರೆಗಿನ ಅಂಕಿ–ಅಂಶಗಳನ್ನು ನೀಡಲಾಗಿದ್ದು, ತಾತ್ಕಾಲಿವಾಗಿವೆ. ಮಳೆ ಸುರಿಯುವ ಪ್ರಮಾಣ ಆಧರಿಸಿ ಬಿತ್ತನೆ ಪ್ರದೇಶದಲ್ಲಿಯೂ ಏರಿಕೆಯಾಗಬಹುದು ಎಂದು ಸಚಿವಾಲಯ ಹೇಳಿದೆ.