ಕೋಲ್ಕತ್ತ: ‘ದೇಶದ ಆರ್ಥಿಕತೆಯು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆಯಾದರೂ ಆರ್ಥಿಕ ಹಿಂಜರಿತದ ಸ್ಥಿತಿಯಲ್ಲಿ ಇಲ್ಲ’ ಎಂದು ನೀತಿ ಆಯೋಗದ ಗೌರವಾನ್ವಿತ ಸದಸ್ಯ ರಾಮ್ಗೋಪಾಲ್ ಅಗರ್ವಾಲ್ ತಿಳಿಸಿದ್ದಾರೆ.
ನೋಟುರದ್ದತಿ, ಜಿಎಸ್ಟಿ, ದಿವಾಳಿ ಕಾಯ್ದೆಯಂತಹ ಸುಧಾರಣೆಗಳು ಅಗತ್ಯವಾಗಿದ್ದವು. ಆದರೆ ಆತುರದಿಂದ ಜಾರಿಗೊಳಿಸಲಾಗಿದೆ. ಇವುಗಳು ಸಹ ಮಂದಗತಿಯ ಬೆಳವಣಿಗೆಗೆ ಕಾರಣಗಳಾಗಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ಹೂಡಿಕೆ ಹೆಚ್ಚಿಸಲು ಹಣಕಾಸು ನಿಯಮಗಳನ್ನು ಸಡಿಲಿಸಬೇಕಿದೆ ಎಂದು ಹೇಳಿದ್ದಾರೆ.