ಮೊಟ್ಟೆ ಮತ್ತು ಕೋಳಿ ಮಾಂಸ ತಿನ್ನುವುದರಿಂದ ಕೊರೊನಾ ಸೋಂಕು ಹರಡಲಿದೆ ಎನ್ನುವ ವದಂತಿಗಳಿಂದಾಗಿ ಉದ್ಯಮದ ವಹಿವಾಟಿನ ಮೇಲೆ ಪೆಟ್ಟು ಬಿದ್ದಿದೆ.ಈ ಭಾರಿ ಮೊತ್ತದ ನಷ್ಟದಿಂದ ಉದ್ಯಮವು ಚೇತರಿಸಿಕೊಳ್ಳಲು ಕೇಂದ್ರ ಸರ್ಕಾರ ಪರಿಹಾರ ಕೊಡುಗೆ ಘೋಷಿಸಬೇಕು ಎಂದು ಅಖಿಲ ಭಾರತ ಕೋಳಿ ತಳಿ ಸಂವರ್ಧಕರ ಸಂಘ (ಎಐಪಿಬಿಎ) ಕೇಂದ್ರಕ್ಕೆ ಮನವಿ ಮಾಡಿದೆ.