ನವದೆಹಲಿ: ಸಿರಿಲ್ ಅಮರ್ಚಂದ್ ಮಂಗಲದಾಸ್ ಕಂಪನಿಯ ಹೆಸರನ್ನು ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಐಪಿಒ ವಿಚಾರವಾಗಿ ಕಾನೂನು ಸಲಹೆಗಳನ್ನು ನೀಡಲು ಸರ್ಕಾರವು ಆಯ್ಕೆ ಮಾಡಿದೆ.
ಒಟ್ಟು ನಾಲ್ಕು ಕಂಪನಿಗಳು ಕಾನೂನು ಸಲಹೆಗಾರ ಆಗಿ ಕೆಲಸ ಮಾಡುವ ಆಸಕ್ತಿ ತೋರಿದ್ದವು. ಅವುಗಳ ಪೈಕಿ ಸಿರಿಲ್ ಅಮರ್ಚಂದ್ ಮಂಗಲದಾಸ್ ಕಂಪನಿಯನ್ನು ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.