<p><strong>ನವದೆಹಲಿ</strong>: ಉದ್ಯೋಗಿಗಳ ಭವಿಷ್ಯ ನಿಧಿ ಪಾವತಿ ಮಾಡದಿರುವ ಉದ್ಯೋಗದಾತ ಸಂಸ್ಥೆಗಳಿಗೆ ದಂಡ ಪಾವತಿ ಇಲ್ಲದೆಯೇ ಬಾಕಿ ಮೊತ್ತ ಪಾವತಿಸಿ ಕ್ಷಮಾದಾನ ಪಡೆದುಕೊಳ್ಳುವ ಯೋಜನೆಯ ಅನುಷ್ಠಾನಕ್ಕೆ ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಮುಂದಾಗಿದೆ.</p>.<p>ಕೇಂದ್ರ ಕಾರ್ಮಿಕ ಸಚಿವ ಮನ್ಸುಕ್ ಮಾಂಡವೀಯ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಟ್ರಸ್ಟಿಗಳ ಕೇಂದ್ರೀಯ ಮಂಡಳಿ (ಸಿಬಿಟಿ) ಸಭೆಯು ‘ಇಪಿಎಫ್ಒ ಕ್ಷಮಾದಾನ ಯೋಜನೆ–2024’ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.</p>.<p>ಬಹಳಷ್ಟು ಕಂಪನಿಗಳು ತಮ್ಮ ಉದ್ಯೋಗಿಗಳ ಭವಿಷ್ಯ ನಿಧಿ ಮೊತ್ತವನ್ನು ಇಪಿಎಫ್ಒಗೆ ಪಾವತಿಸಿಲ್ಲ. ಇದರಿಂದ ಉದ್ಯೋಗಿಗಳಿಗೆ ತೊಂದರೆಯಾಗಿದೆ. ಅಂತಹ ಕಂಪನಿಗಳು ಅಥವಾ ಸಂಸ್ಥೆಗಳು ಸ್ವಯಂಪ್ರೇರಣೆಯಿಂದ ಬಾಕಿ ಮೊತ್ತ ಪಾವತಿಸಲು ಅನುವಾಗುವಂತೆ ಈ ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ. </p>.<p>ಆನ್ಲೈನ್ನಲ್ಲಿ ಘೋಷಣೆ ಮಾಡಿಕೊಳ್ಳುವ ಮೂಲಕ ಕಂಪನಿಗಳು ಈ ಯೋಜನೆಯಡಿ ಪ್ರಯೋಜನ ಪಡೆಯಬಹುದಾಗಿದೆ. ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ಗುರಿಯನ್ನೂ ಇದರಡಿ ಹೊಂದಲಾಗಿದೆ ಎಂದು ಹೇಳಿದೆ.</p>.<p>ಇಪಿಎಫ್ ಯೋಜನೆ 1952ಕ್ಕೆ ತಿದ್ದುಪಡಿ ತರಲು ಮಂಡಳಿಯು ಅನುಮೋದನೆ ನೀಡಿದೆ. ಇದರಡಿ ಉದ್ಯೋಗಿಗೆ ನಿವೃತ್ತಿಯ ಇಡುಗಂಟು ಪಾವತಿಯಾದ ದಿನದವರೆಗೂ ಬಡ್ಡಿ ಪಾವತಿಯಾಗಲಿದೆ. ಇದರಿಂದ ಇಪಿಎಫ್ಒ ಸದಸ್ಯರಿಗೆ ಹೆಚ್ಚಿನ ಆರ್ಥಿಕ ಪ್ರಯೋಜನ ದೊರೆಯಲಿದೆ.</p>.<p>ಇಡಿಎಲ್ಐ ವಿಸ್ತರಣೆ: ಇಪಿಎಫ್ ಖಾತೆದಾರರಿಗೆ ನೀಡುವ ಉದ್ಯೋಗಿಯ ಠೇವಣಿ ಆಧಾರಿತ ವಿಮಾ (ಇಡಿಎಲ್ಐ) ಸೌಲಭ್ಯದ ವಿಸ್ತರಣೆಗೆ ಮಂಡಳಿಯು ಅನುಮೋದನೆ ನೀಡಿದೆ.</p>.<p>ಪ್ರಸಕ್ತ ವರ್ಷದ ಏಪ್ರಿಲ್ 28ರಿಂದ ಪೂರ್ವಾನ್ವಯವಾಗುವಂತೆ ಈ ಯೋಜನೆಯಡಿ ಸೌಲಭ್ಯ ದೊರೆಯಲಿದೆ. ಯೋಜನೆಯಡಿ ಕನಿಷ್ಠ ₹2.5 ಲಕ್ಷ ಹಾಗೂ ಗರಿಷ್ಠ ₹7 ಲಕ್ಷ ವಿಮಾ ಸೌಲಭ್ಯ ದೊರೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಉದ್ಯೋಗಿಗಳ ಭವಿಷ್ಯ ನಿಧಿ ಪಾವತಿ ಮಾಡದಿರುವ ಉದ್ಯೋಗದಾತ ಸಂಸ್ಥೆಗಳಿಗೆ ದಂಡ ಪಾವತಿ ಇಲ್ಲದೆಯೇ ಬಾಕಿ ಮೊತ್ತ ಪಾವತಿಸಿ ಕ್ಷಮಾದಾನ ಪಡೆದುಕೊಳ್ಳುವ ಯೋಜನೆಯ ಅನುಷ್ಠಾನಕ್ಕೆ ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಮುಂದಾಗಿದೆ.</p>.<p>ಕೇಂದ್ರ ಕಾರ್ಮಿಕ ಸಚಿವ ಮನ್ಸುಕ್ ಮಾಂಡವೀಯ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಟ್ರಸ್ಟಿಗಳ ಕೇಂದ್ರೀಯ ಮಂಡಳಿ (ಸಿಬಿಟಿ) ಸಭೆಯು ‘ಇಪಿಎಫ್ಒ ಕ್ಷಮಾದಾನ ಯೋಜನೆ–2024’ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.</p>.<p>ಬಹಳಷ್ಟು ಕಂಪನಿಗಳು ತಮ್ಮ ಉದ್ಯೋಗಿಗಳ ಭವಿಷ್ಯ ನಿಧಿ ಮೊತ್ತವನ್ನು ಇಪಿಎಫ್ಒಗೆ ಪಾವತಿಸಿಲ್ಲ. ಇದರಿಂದ ಉದ್ಯೋಗಿಗಳಿಗೆ ತೊಂದರೆಯಾಗಿದೆ. ಅಂತಹ ಕಂಪನಿಗಳು ಅಥವಾ ಸಂಸ್ಥೆಗಳು ಸ್ವಯಂಪ್ರೇರಣೆಯಿಂದ ಬಾಕಿ ಮೊತ್ತ ಪಾವತಿಸಲು ಅನುವಾಗುವಂತೆ ಈ ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ. </p>.<p>ಆನ್ಲೈನ್ನಲ್ಲಿ ಘೋಷಣೆ ಮಾಡಿಕೊಳ್ಳುವ ಮೂಲಕ ಕಂಪನಿಗಳು ಈ ಯೋಜನೆಯಡಿ ಪ್ರಯೋಜನ ಪಡೆಯಬಹುದಾಗಿದೆ. ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ಗುರಿಯನ್ನೂ ಇದರಡಿ ಹೊಂದಲಾಗಿದೆ ಎಂದು ಹೇಳಿದೆ.</p>.<p>ಇಪಿಎಫ್ ಯೋಜನೆ 1952ಕ್ಕೆ ತಿದ್ದುಪಡಿ ತರಲು ಮಂಡಳಿಯು ಅನುಮೋದನೆ ನೀಡಿದೆ. ಇದರಡಿ ಉದ್ಯೋಗಿಗೆ ನಿವೃತ್ತಿಯ ಇಡುಗಂಟು ಪಾವತಿಯಾದ ದಿನದವರೆಗೂ ಬಡ್ಡಿ ಪಾವತಿಯಾಗಲಿದೆ. ಇದರಿಂದ ಇಪಿಎಫ್ಒ ಸದಸ್ಯರಿಗೆ ಹೆಚ್ಚಿನ ಆರ್ಥಿಕ ಪ್ರಯೋಜನ ದೊರೆಯಲಿದೆ.</p>.<p>ಇಡಿಎಲ್ಐ ವಿಸ್ತರಣೆ: ಇಪಿಎಫ್ ಖಾತೆದಾರರಿಗೆ ನೀಡುವ ಉದ್ಯೋಗಿಯ ಠೇವಣಿ ಆಧಾರಿತ ವಿಮಾ (ಇಡಿಎಲ್ಐ) ಸೌಲಭ್ಯದ ವಿಸ್ತರಣೆಗೆ ಮಂಡಳಿಯು ಅನುಮೋದನೆ ನೀಡಿದೆ.</p>.<p>ಪ್ರಸಕ್ತ ವರ್ಷದ ಏಪ್ರಿಲ್ 28ರಿಂದ ಪೂರ್ವಾನ್ವಯವಾಗುವಂತೆ ಈ ಯೋಜನೆಯಡಿ ಸೌಲಭ್ಯ ದೊರೆಯಲಿದೆ. ಯೋಜನೆಯಡಿ ಕನಿಷ್ಠ ₹2.5 ಲಕ್ಷ ಹಾಗೂ ಗರಿಷ್ಠ ₹7 ಲಕ್ಷ ವಿಮಾ ಸೌಲಭ್ಯ ದೊರೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>