ರನ್ನ ಶುಗರ್ಸ್: ನಿರಾಣಿ ಸಮೂಹಕ್ಕೆ
ಮುಧೋಳ ತಾಲ್ಲೂಕಿನ ತಿಮ್ಮಾಪುರದ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ನಡೆಸುವ ಜವಾಬ್ದಾರಿ ನಿರಾಣಿ ಸಮೂಹ ವಹಿಸಿಕೊಂಡಿದೆ. ಕಾರ್ಖಾನೆಯನ್ನು ಈ ಭಾಗದ ರೈತರು, ಜನಪ್ರತಿನಿಧಿಗಳು ತುಂಬಾ ಶ್ರಮವಹಿಸಿ ಕಟ್ಟಿದ್ದಾರೆ. ಅವರೆಲ್ಲರ ಆಶಯದಂತೆ ನಿರಾಣಿ ಸಮೂಹ ಕಾರ್ಯನಿರ್ವಹಿಸಲಿದೆ ಎಂದು ನಿರಾಣಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಹೇಳಿದರು.