ಯೋಜನೆ ವಿಸ್ತರಣೆ: ಹೋಟೆಲ್, ಪ್ರವಾಸೋದ್ಯಮ, ಸಾರಿಗೆ, ಜವಳಿ ಸೇರಿದಂತೆ ತೊಂದರೆಗೆ ಸಿಲುಕಿರುವ ಒಟ್ಟು 26 ವಲಯಗಳಿಗೆ ಪ್ರಕಟಿಸಿರುವ, ₹ 3 ಲಕ್ಷ ಕೋಟಿ ಮೊತ್ತದ ತುರ್ತು ಸಾಲ ಖಾತರಿ ಯೋಜನೆಯನ್ನು ಕೇಂದ್ರ ವಿಸ್ತರಿಸಿದೆ. ಈ ಯೋಜನೆಯು ನವೆಂಬರ್ 30ಕ್ಕೆ ಕೊನೆಗೊಳ್ಳಬೇಕಿತ್ತು. ಅದನ್ನು ಈಗ 2021ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ.