‘ಜಾಗತಿಕ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದ ಸಂದರ್ಭದಲ್ಲಿ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಮ್ಯೂಚುವಲ್ ಫಂಡ್ ಕಂಪನಿಗಳು ನಗದು ಬಿಕ್ಕಟ್ಟು ಎದುರಿಸಿದ್ದವು. ಆಗ ಕೇಂದ್ರ ಸರ್ಕಾರವು ತಕ್ಷಣವೇ ಆರ್ಬಿಐ, ಸೆಬಿ, ಬ್ಯಾಂಕ್ಗಳ ಒಕ್ಕೂಟ, ಮ್ಯೂಚುವಲ್ ಫಂಡ್ ಕಂಪನಿಗಳು ಮತ್ತು ಇನ್ನೂ ಹಲವರ ಸಲಹೆ ಪಡೆದಿತ್ತು. ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಸಮಿತಿಯ ತುರ್ತು ಸಭೆ ಕರೆದು ದಿನದಾಂತ್ಯದೊಳಗೆ ಪರಿಹಾರ ಕೊಂಡುಕೊಳ್ಳಲಾಗಿತ್ತು’ ಎಂದರು.