ನವದೆಹಲಿ: ಉದ್ಯಮಿಗಳಾದ ಆನಂದ ಮಹೀಂದ್ರ, ಪಂಕಜ್ ಆರ್. ಪಟೇಲ್ ಮತ್ತು ವೇಣು ಶ್ರೀನಿವಾಸನ್ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್ನ ಕೇಂದ್ರ ಮಂಡಳಿಗೆ ಅಧಿಕಾರೇತರ ನಿರ್ದೇಶಕರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.
ಐಐಎಂ (ಅಹಮದಾಬಾದ್) ನಿವೃತ್ತ ಪ್ರೊಫೆಸರ್ ರವೀಂದ್ರ ಎಚ್. ಧೋಲಾಕಿಯಾ ಅವರನ್ನೂ ಇದೇ ಸ್ಥಾನಕ್ಕೆ ನೇಮಿಸಲಾಗಿದೆ. ಇವರೆಲ್ಲರನ್ನು ನಾಲ್ಕು ವರ್ಷಗಳ ಅವಧಿಗೆ ನೇಮಿಸಲಾಗಿದೆ ಎಂದು ಆರ್ಬಿಐ ತಿಳಿಸಿದೆ.
ಕೇಂದ್ರ ಮಂಡಳಿಯ ನಿರ್ದೇಶಕರು ಆರ್ಬಿಐನ ಆಡಳಿತವನ್ನು ನೋಡಿಕೊಳ್ಳುತ್ತಾರೆ. ಈ ಮಂಡಳಿಗೆ ಆರ್ಬಿಐ ಗವರ್ನರ್ ಅಧ್ಯಕ್ಷರಾಗಿರುತ್ತಾರೆ.
ಆನಂದ ಮಹೀಂದ್ರ ಅವರು ಮಹೀಂದ್ರ ಸಮೂಹದ ಅಧ್ಯಕ್ಷ. ವೇಣು ಶ್ರೀನಿವಾಸನ್ ಅವರು ಟಿವಿಎಸ್ ಮೋಟರ್ ಕಂಪನಿಯ ಗೌರವಾಧ್ಯಕ್ಷ. ಪಂಕಜ್ ಪಟೇಲ್ ಅವರು ಜೈಡಸ್ ಲೈಫ್ಸೈನ್ಸಸ್ ಕಂಪನಿಯ ಅಧ್ಯಕ್ಷ.