ಹಣಕಾಸು ಸಂಸ್ಥೆಗಳಲ್ಲಿ ನಗದು ಲಭ್ಯತೆ ಜಾಸ್ತಿ ಆಗಬೇಕು, ಹೆಚ್ಚು ಜನ ಅವುಗಳಲ್ಲಿ ಹಣ ಹೂಡಿಕೆ ಮಾಡಬೇಕು ಎಂಬುದು ಸರ್ಕಾರದ ಬಯಕೆ ಎಂದರು. ‘ಬ್ಯಾಂಕ್ ಇರಲಿ ಅಥವಾ ಇನ್ಯಾವುದೇ ಕಂಪನಿಯ ಖಾಸಗೀಕರಣ ಇರಲಿ, ಅಲ್ಲಿ ಕೆಲಸ ಮಾಡುತ್ತಿರುವವರ ಹಿತಾಸಕ್ತಿಯನ್ನು ರಕ್ಷಿಸಲಾಗುತ್ತದೆ. ಅವರ ವೇತನ, ವೇತನ ಶ್ರೇಣಿ, ಪಿಂಚಣಿ ಇವೆಲ್ಲವುಗಳ ಬಗ್ಗೆ ಕಾಳಜಿ ವಹಿಸಲಾಗುತ್ತದೆ’ ಎಂಬ ಭರವಸೆ ನೀಡಿದರು.