ನವದೆಹಲಿ: ವಿವಿಧ ಸಂಸ್ಥೆಗಳಿಂದ ಮಾಹಿತಿ ಪಡೆದು, ದತ್ತಾಂಶ ವಿಶ್ಲೇಷಣೆಯ ನೆರವು ಪಡೆದು ಕೇಂದ್ರ ಸರ್ಕಾರವು ಜಿಎಸ್ಟಿ ವಂಚಕರ ವಿರುದ್ಧ ಸಮರ ಸಾರಿದೆ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಭಾನುವಾರ ಹೇಳಿದ್ದಾರೆ. ಜಿಎಸ್ಟಿ ತೆರಿಗೆ ವಂಚನೆ ಆರೋಪದ ಅಡಿ ಅಂದಾಜು ಏಳು ಸಾವಿರ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸುವ ಪ್ರಕ್ರಿಯೆ ಶುರುವಾಗಿದೆ, 187 ಜನರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.