ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಉಳಿದ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಿಗೆ ಕೇಂದ್ರ ಸರ್ಕಾರವು ₹ 83 ಸಾವಿರ ಕೋಟಿಗಳ ಪುನರ್ಧನ ನೆರವು ನೀಡಲಿದೆ.
ಇದರಿಂದ ಈ ಹಣಕಾಸು ವರ್ಷದಲ್ಲಿನ ಬ್ಯಾಂಕ್ಗಳ ಪುನರ್ಧನ ಮೊತ್ತವು ₹ 65 ಸಾವಿರ ಕೋಟಿಗಳಿಂದ ₹ 1.06 ಲಕ್ಷ ಕೋಟಿಗೆ ತಲುಪಲಿದೆ.
ಬ್ಯಾಂಕ್ಗಳಿಗೆ ಹೆಚ್ಚುವರಿಯಾಗಿ ₹ 41 ಸಾವಿರ ಕೋಟಿಗಳ ನೆರವು ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಇದಕ್ಕೂ ಮೊದಲು ಪೂರಕ ಅನುದಾನದ ಎರಡನೆ ಕಂತಿಗೆ ಸಂಸತ್ತಿನ ಅನುಮೋದನೆ ಪಡೆದುಕೊಂಡಿತು.
‘ಈ ಪುನರ್ಧನ ನೆರವಿನಿಂದ ಬ್ಯಾಂಕ್ಗಳ ಸಾಲ ನೀಡುವ ಸಾಮರ್ಥ್ಯ ಹೆಚ್ಚಳಗೊಳ್ಳಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿರುವ ನಿರ್ಬಂಧಿತ ಕಠಿಣ ಕ್ರಮಗಳಿಂದ (ಪಿಎಸಿ) ಅವುಗಳು ಹೊರ ಬರಲೂ ಸಾಧ್ಯವಾಗಲಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
‘ಬ್ಯಾಂಕ್ಗಳಲ್ಲಿನ ವಸೂಲಾಗದ ಸಾಲಗಳನ್ನು (ಎನ್ಪಿಎ) ಗುರುತಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ‘ಎನ್ಪಿಎ’ ಪ್ರಮಾಣ ಕಡಿಮೆಯಾಗುವ ಪ್ರಕ್ರಿಯೆಗೂ ಚಾಲನೆ ಸಿಕ್ಕಿದೆ’ ಎಂದು ತಿಳಿಸಿದ್ದಾರೆ.