ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿಲ್ಲರೆ ಹೂಡಿಕೆಗೆ ಉತ್ತೇಜನ ನೀಡಿ’

ಹಣಕಾಸು ಸಚಿವೆ ನಿರ್ಮಲಾಗೆ ಬಂಡವಾಳ ಮಾರುಕಟ್ಟೆ ಪ್ರತಿನಿಧಿಗಳ ಮನವಿ
Last Updated 13 ಜೂನ್ 2019, 16:19 IST
ಅಕ್ಷರ ಗಾತ್ರ

ನವದೆಹಲಿ: ಕಾರ್ಪೊರೇಟ್‌ ಬಾಂಡ್‌ಗಳಲ್ಲಿನ ಹೂಡಿಕೆಗೆ ಸಂಬಂಧಿಸಿದಂತೆ ಚಿಲ್ಲರೆ ಹೂಡಿಕೆದಾರರಿಗೆ ತೆರಿಗೆ ಉತ್ತೇಜನ ನೀಡುವಂತೆ ಹಣಕಾಸು ಮಾರುಕಟ್ಟೆಯ ಪ್ರತಿನಿಧಿಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಹಣಕಾಸು ಮತ್ತು ಬಂಡವಾಳ ಮಾರುಕಟ್ಟೆಯ ಪ್ರತಿನಿಧಿಗಳುಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರೊಂದಿಗೆ ಗುರುವಾರ ಇಲ್ಲಿ ನಡೆಸಿದ ಬಜೆಟ್ ಪೂರ್ವ ಸಭೆಯಲ್ಲಿ ಈ ಹಕ್ಕೊತ್ತಾಯ ಮಂಡಿಸಲಾಗಿದೆ.

ಪ್ರಾದೇಶಿಕ ಬ್ಯಾಂಕ್‌ಗಳಲ್ಲಿ ಬಂಡವಾಳ ಹೂಡಿಕೆ, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಅಗತ್ಯವಾದ ನಗದು ಪೂರೈಕೆ ವಿಷಯಗಳ ಬಗ್ಗೆ ತೀವ್ರ ಗಮನ ಹರಿಸುವಂತೆಯೂ ಮನವಿ ಮಾಡಿದ್ದಾರೆ.

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಪರಾಮರ್ಶೆ, ಸಮಿತಿ ರಚನೆ ಮಾಡುವ ಮೂಲಕ ಬ್ಯಾಂಕ್‌ಗಳ ಎನ್‌ಪಿಎ ಪರಿಶೀಲನೆ, ಸಾಲ ವಿನಿಮಯ ವಹಿವಾಟು ನಿಧಿ (ಇಟಿಎಫ್‌) ಸ್ಥಾಪನೆ, ಬಂಡವಾಳ ಮಾರುಕಟ್ಟೆಯಲ್ಲಿ ಸುರಕ್ಷತಾ ವಹಿವಾಟು ತೆರಿಗೆಯಂತಹ (ಎಸ್‌ಟಿಟಿ) ವಿವಿಧ ತೆರಿಗೆ ದರ ಇಳಿಕೆ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಕಾರ್ಪೊರೇಟ್‌ ಬಾಂಡ್‌ ಮಾರುಕಟ್ಟೆಯನ್ನು ವಿಸ್ತರಿಸುವುದು ಹೇಗೆ ಎನ್ನುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಸದ್ಯಕ್ಕೆ ಚಿಲ್ಲರೆ ಹೂಡಿಕೆದಾರರು ಮ್ಯೂಚುವಲ್‌ ಫಂಡ್‌ಗಳ ಮೂಲಕ ಹೂಡಿಕೆ ಮಾಡುತ್ತಿದ್ದಾರೆ. ಮ್ಯೂಚುವಲ್‌ ಫಂಡ್‌ಗಳಿಗೆ ನೀಡಿರುವಂತೆಯೇ ಚಿಲ್ಲರೆ ಹೂಡಿಕೆದಾರರಿಗೂ ಒಂದಿಷ್ಟು ತೆರಿಗೆ ಪ್ರಯೋಜನ ನೀಡಿದರೆ ಮಾರುಕಟ್ಟೆಗೆ ನೆರವಾಗಲಿದೆ’ ಎಂದು ಐಡಿಬಿಐ ಬ್ಯಾಂಕ್‌ನ ಸಿಇಒ ರಾಕೇಶ್‌ ಶರ್ಮಾ ತಿಳಿಸಿದ್ದಾರೆ.

‘ಹೂಡಿಕೆ ಹೆಚ್ಚಿಸಲು ಅವಧಿ ಯೋಜನೆಗಳಿಗೆ ತೆರಿಗೆ ಉತ್ತೇಜನ ನೀಡಬೇಕು’ ಎಂದು ವಿಮೆ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರದ (ಐಆರ್‌ಡಿಎಐ) ಅಧ್ಯಕ್ಷ ಸುಭಾಷ್ ಚಂದ್ರ ಕುಂಠಿಯಾ ಸಲಹೆ ನೀಡಿದ್ದಾರೆ.

‘ಮೂಲಸೌಕರ್ಯಕ್ಕೆ ಹಣಕಾಸು ನೆರವು, ಎಂಎಸ್‌ಎಂಇ, ರಫ್ತು ವಲಯಗಳಲ್ಲಿ ಹೂಡಿಕೆ ಹೆಚ್ಚಿಸಲು ಯಾವ ರೀತಿಯ ತೆರಿಗೆ ಪ್ರಯೋಜನಗಳನ್ನು ನೀಡಬಹುದು ಎನ್ನುವ ಕುರಿತು ಹಲವಾರು ಸಲಹೆಗಳು ಬಂದಿವೆ’ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌ ತಿಳಿಸಿದ್ದಾರೆ.

‘ವಾಹನ ಬಿಡಿಭಾಗ: ಜಿಎಸ್‌ಟಿ ತಗ್ಗಿಸಿ’

ವಾಹನಗಳ ಬಿಡಿಭಾಗಗಳು, ಅಲ್ಯುಮಿನಿಯಂ ಪಾತ್ರೆಗಳ ಮೇಲಿನ ಜಿಎಸ್‌ಟಿ ತಗ್ಗಿಸುವಂತೆ ಅಖಿಲ ಭಾರತ ವರ್ತಕರ ಒಕ್ಕೂಟವು (ಸಿಎಐಟಿ) ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಬಹಳಷ್ಟು ವಾಹನ ಬಿಡಿಭಾಗಗಳು ಮತ್ತು ಅಲ್ಯುಮಿನಿಯಂ ಪಾತ್ರೆಗಳು ಐಷಾರಾಮಿ ವರ್ಗಕ್ಕೆ ಬರುವುದಿಲ್ಲ. ಹೀಗಾಗಿ ಶೇ 28ರ ಗರಿಷ್ಠ ತೆರಿಗೆ ದರದಿಂದ ಕೈಬಿಡಬೇಕು. ಜಿಎಸ್‌ಟಿಯ ವಿವಿಧ ತೆರಿಗೆ ದರಗಳಲ್ಲಿ ಇರುವ ಸರಕುಗಳ ಪರಿಶೀಲನೆ ನಡೆಸುವಂತೆಯೂ ಕೇಳಿಕೊಂಡಿದೆ.

ಹಾರ್ಡ್‌ವೇರ್‌, ಮೊಬೈಲ್‌ ಕವರ್‌, ಐಸ್‌ಕ್ರೀಂ, ಹೆಲ್ತ್‌ ಡ್ರಿಂಕ್ಸ್‌, ಪೇಂಟ್ಸ್‌, ಮಾರ್ಬಲ್‌, ಬಳಸಿದ ಕಾರುಗಳು ಮತ್ತು ದ್ವಿಚಕ್ ರವಾಹನಗಳ ಮೇಲಿನ ತೆರಿಗೆಯನ್ನೂ ತಗ್ಗಿಸುವ ಸಂಬಂಧ ಹಣಕಾಸು ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಅದನ್ನು ಪರಿಶೀಲಿಸುವುದಾಗಿ ಅವರು ಹೇಳಿದ್ದಾರೆ ಎಂದು ಒಕ್ಕೂಟ ತಿಳಿಸಿದೆ.

ವಾಹನಉದ್ಯಮದ ಬೇಡಿಕೆ:ದೇಶದಲ್ಲಿ ವಾಹನ ಮಾರಾಟ 11 ತಿಂಗಳಿನಿಂದಲೂ ಇಳಿಮುಖವಾಗಿದೆ. ಹೀಗಾಗಿ ಎಲ್ಲಾ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇ 28 ರಿಂದ ಶೇ 18ಕ್ಕೆ ತಗ್ಗಿಸುವಂತೆ ಉದ್ಯಮವೂ ಬೇಡಿಕೆ ಇಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT