ತ್ರಿಭಾಷಾ ಸೂತ್ರ ಬೇಕು: ಭಾರತದಲ್ಲಿ ತ್ರಿಭಾಷಾ ಸೂತ್ರ ಪಾಲನೆಯಲ್ಲಿದೆ. ಹಾಗಾಗಿ, ಇಂಗ್ಲಿಷಿನಲ್ಲಿ ಫಲಕ ಬೇಕಿತ್ತು ಎಂದು ಸಾಹಿತಿ ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು. ‘ಹಿಂದಿಯ ಬಗ್ಗೆ ದ್ವೇಷ ಬೇಡ. ಆದರೆ, ಇಂಗ್ಲಿಷಿನ ಹೇರಿಕೆಯ ಕೆಲಸವನ್ನು ಹಿಂದಿ ಮಾಡಬಾರದು. ಆ ಆತಂಕ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಇದೆ. ಹಾಗಾಗಿ, ಮೂರೂ ಭಾಷೆಗಳಲ್ಲಿ ಫಲಕಗಳು ಇರಬೇಕು’ ಎಂದು ಅಭಿಪ್ರಾಯಪಟ್ಟರು.