ಪೂರ್ಣ ಕುಂಭಮೇಳ, ಅಂಬರಕೊಪ್ಪ ಕಲಾವಿದ ತಂಡದಿಂದ ಡೊಳ್ಳು, ಝಾಂಜ್ ಮೇಳ, ಕರಡಿ ಕುಣಿತ, ಹೊಸದುರ್ಗದ ಕಲಾವಿದ ಪುರೋಹಿತರಿಂದ ವೀರಗಾಸೆ, ಹುಬ್ಬಳ್ಳಿ ಸುಳ್ಳದ ಕಲಾ ತಂಡದಿಂದ ಜಗ್ಗಲಿ, ಬಳ್ಳಾರಿ ಕಲಾ ತಂಡದವರಿಂದ ನಂದಿಧ್ವಜ, ಕುದರಿ ಕುಣಿತ, ಹಾನಗಲ್ ಕಾವಿದರಿಂದ ರಾಜ ವೈಭದ ಛತ್ರಿಗಳು ಸೇರಿದಂತೆ ರಾಮಕೃಷ್ಣ ಸುಗಂಧಿ ಸಹೋದರರ ತಂಡದ ನೇತೃತ್ವದಲ್ಲಿ ಸುಮಾರು ಹತ್ತಕ್ಕೂ ಹೆಚ್ಚಿನ ಜಾನಪದ ಕಲಾ ತಂಡಗಳ ವಾದ್ಯ ವೈಭವವು ಮೆರವಣಿಗೆಗೆ ಮೆರಗು ತಂದಿತು. ಭಕ್ತರಿಗೆ, ಪೂರ್ಣಕುಂಭ ಹೊತ್ತವರಿಗೆ ಹಾಗೂ ಕಲಾವಿದರಿಗೆ ಅಲ್ಲಲ್ಲಿ ಉಪಹಾರ, ತಂಪುಪಾನಿಯ, ನೀರು, ಮಜ್ಜಿಗೆ ವಿತರಿಸುವ ವ್ಯವಸ್ಥೆ ಮಾಡಲಾ