ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಿಸಂ ಜಾಗೃತಿ ದಿನ: ನೀಲಿಬಣ್ಣದಲ್ಲಿ ಕಂಗೊಳಿಸಿದ ಕುತುಬ್‌ ಮಿನಾರ್‌

Last Updated 2 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವ ಆಟಿಸಂ ಜಾಗೃತಿ ದಿನದ ಅಂಗವಾಗಿ ಕುತುಬ್‌ ಮಿನಾರ್‌ ಸೋಮವಾರ ನೀಲಿಬಣ್ಣದಿಂದ ಕಂಗೊಳಿಸಿತು.

ಆಟಿಸಂನ್ನು ಸಮಾಜವು ಸಂವೇದನಾಶೀಲವಾಗಿ ಸ್ವೀಕರಿಸುವ ಉದ್ದೇಶದಿಂದ ‘ಲೈಟ್‌ ಇಟ್‌ಅಪ್‌ ಬ್ಲೂ’ ಹೆಸರಿನಲ್ಲಿ ಪ್ರಚಾರ ಕಾರ್ಯ ಹಮ್ಮಿಕೊಳ್ಳಲಾಗಿತ್ತು.

ಆಟಿಸಂ ಮಕ್ಕಳ ಸಂಸ್ಥೆ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ), ಸಾಮಾಜಿಕ ನ್ಯಾಯ ಇಲಾಖೆಯು ಸಹಯೋಗದಲ್ಲಿ ಎರಡನೇ ಸಲ ಈ ಸ್ಮಾರಕದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ಹಿಂದೆ ಇದೇ ದಿನ ನಯಾಗಾರ ಫಾಲ್ಸ್‌, ವಿಶ್ವಸಂಸ್ಥೆ ಕಟ್ಟಡ, ಶ್ವೇತಭವನವನ್ನೂ ನೀಲಿಬಣ್ಣದಿಂದ ಬೆಳಗಿಸಲಾಗಿತ್ತು.

‘ಸಮಾಜದಲ್ಲಿ ಎಲ್ಲರೂ ಸಮಾನರು. ಆಟಿಸಂ ಮಕ್ಕಳನ್ನು ಸಾಮಾನ್ಯರಂತೆ ಕಾಣಬೇಕು’ ಎಂಬ ಸಂದೇಶವನ್ನು ಈ ಕಾರ್ಯಕ್ರಮ ಸಾರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT