ನವದೆಹಲಿ:ಐಎಲ್ ಆ್ಯಂಡ್ ಎಫ್ಎಸ್ ಮತ್ತು ಅದರ ಅಂಗ ಸಂಸ್ಥೆಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆಗಂಭೀರ ಸ್ವರೂಪದ ಆರ್ಥಿಕ ಅಪರಾಧಗಳ ತನಿಖಾ ಸಂಸ್ಥೆಯು (ಎಸ್ಎಫ್ಐಒ) ಶನಿವಾರ ತನಿಖೆ ಆರಂಭಿಸಿದೆ.
ದೇಶ ಬಿಟ್ಟು ಹೋಗದಂತೆ ಸಂಸ್ಥೆಗಳ ಮಾಜಿ ನಿರ್ದೇಶಕರಿಗೆ ನಿಷೇಧವನ್ನೂ ಹೇರಿದೆ.
ಒಟ್ಟಾರೆ ₹ 91 ಸಾವಿರ ಕೋಟಿಗೂ ಅಧಿಕ ಮೊತ್ತದಸಾಲದ ಸುಳಿಗೆ ಸಿಲುಕಿರುವ ಐಎಲ್ ಆ್ಯಂಡ್ ಎಫ್ಎಸ್ ಅನ್ನು ಕೇಂದ್ರ ಸರ್ಕಾರ ಸೋಮವಾರ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಶನಿವಾರ ಎಸ್ಎಫ್ಐಒ ತನಿಖೆ ಆರಂಭಿಸಿದೆ.
ಕೆಲವು ನಿರ್ದೇಶಕರ ಪಾಸ್ಪೋರ್ಟ್ ವಶಕ್ಕೆ ಪಡೆಯುವಂತೆಯೂ ಕೇಂದ್ರ ಸರ್ಕಾರ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
‘ದೇಶದ ಹಣಕಾಸು ಸಂಸ್ಥೆಗಳನ್ನು ಹಗರಣಮುಕ್ತಗೊಳಿಸಲು ಕೇಂದ್ರ ಸರ್ಕಾರ ಕ್ಷಿಪ್ರ ಕ್ರಮ ಕೈಗೊಂಡಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ವಲಯದ ಸ್ಥಿತಿ ಸುಧಾರಿಸಲಿದೆ’ ಎಂದು ಎಸ್ಬಿಐ ಅಧ್ಯಕ್ಷ ರಜನೀಶ್ ಕುಮಾರ್ಅಭಿಪ್ರಾಯಪಟ್ಟಿದ್ದಾರೆ.