ಮುಂಬೈ: 2020ರಲ್ಲಿ ದೇಶದ ಸಿರಿವಂತರ ಪಟ್ಟಿಗೆ 40 ಮಂದಿ ಹೊಸಬರು ಸೇರ್ಪಡೆಯಾಗಿದ್ದಾರೆ. ಇದರಿಂದ ಒಟ್ಟಾರೆ ಸಿರಿವಂತರ ಸಂಖ್ಯೆ 177ಕ್ಕೆ ಏರಿಕೆಯಾಗಿದೆ.
ಹುರುನ್ ಇಂಡಿಯಾ ಕಂಪನಿಯು ಬಿಡುಗಡೆ ಮಾಡಿರುವ 2020ರ ಸಿರಿವಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಮೊದಲ ಸ್ಥಾನದಲ್ಲಿದ್ದಾರೆ. ಜಾಗತಿಕವಾಗಿ ಅವರು ಎಂಟನೇ ಸ್ಥಾನ ಪಡೆದಿದ್ದಾರೆ. ಅವರ ಸಂಪತ್ತು ಶೇ 24ರಷ್ಟು ಹೆಚ್ಚಾಗಿದ್ದು, ಒಟ್ಟಾರೆ ಸಂಪತ್ತು ಮೌಲ್ಯ ₹ 6.05 ಲಕ್ಷ ಕೋಟಿಗಳಷ್ಟಿದೆ.
ಗೌತಮ್ ಅದಾನಿ ಅವರ ಸಂಪತ್ತು ಎರಡುಪಟ್ಟು ಹೆಚ್ಚಾಗಿದ್ದು, ₹ 2.33 ಲಕ್ಷ ಕೋಟಿಗಳಿಗೆ ತಲುಪಿದೆ. ದೇಶದ ಸಿರಿವಂತ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಜಾಗತಿಕವಾಗಿ 48ನೇ ಸ್ಥಾನ ಪಡೆದುಕೊಂಡಿದ್ದಾರೆ.
ಎಚ್ಸಿಎಲ್ ಕಂಪನಿಯ ಶಿವ ನಾಡಾರ್ ಅವರು ದೇಶದ ಮೂರನೇ ಸಿರಿವಂತ ವ್ಯಕ್ತಿ ಆಗಿದ್ದಾರೆ.
ಪತಂಜಲಿ ಆಯುರ್ವೇದ ಸಂಸ್ಥೆಯ ಆಚಾರ್ಯ ಬಾಲಕೃಷ್ಣ ಅವರ ಸಂಪತ್ತನಲ್ಲಿ ಶೇ 32ರಷ್ಟು ಇಳಿಕೆ ಆಗಿದೆ.
ಸಿರಿವಂತ ಮಹಿಳೆಯರ ಪಟ್ಟಿಯಲ್ಲಿ ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಶಾ ಅವರು ಮೊದಲ ಸ್ಥಾನದಲ್ಲಿದ್ದಾರೆ. ಗೊದ್ರೇಜನ್ ಸ್ಮಿತಾ ವಿ. ಕೃಷ್ಣ ಅವರು ಎರಡನೇ ಹಾಗೂ ಲುಪಿನ್ ಕಂಪನಿಯ ಮಂಜು ಗುಪ್ತಾ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಜಾಗತಿಕ ಮಟ್ಟದಲ್ಲಿ ಟೆಸ್ಲಾ ಕಂಪನಿಯ ಎಲನ್ ಮಸ್ಕ್ ಅವರು ಮೊದಲ ಸ್ಥಾನದಲಿದ್ದು, ಅಮೆಜಾನ್ನ ಜೆಫ್ ಬೆಜೋಸ್ ಎರಡನೇ ಸ್ಥಾನದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.