ದಲಿತ ಸಮುದಾಯಗಳ ನಡುವಿನ ವಿಘಟನೆ, ರಾಜಕೀಯ ಪ್ರಜ್ಞೆಯ ಕೊರತೆ, ವಿದ್ಯಾವಂತರಲ್ಲಿನ ಬೌದ್ಧಿಕ ದಾರಿದ್ರ್ಯ, ರಾಜಕೀಯ ಪಕ್ಷಗಳಿಗೆ ಅಂಟಿಕೊಂಡಿರುವ ಸಂಘಟನೆಗಳು, ರಾಜಕಾರಣಿಗಳ ಸ್ವಹಿತಾಸಕ್ತಿ, ದೂರದೃಷ್ಟಿಯಿಲ್ಲದ ಹೋರಾಟಗಳು ಇದಕ್ಕೆಲ್ಲ ಕಾರಣ. ಆದ್ದರಿಂದ ಗತಕಾಲದಿಂದಲೂ ಅಸ್ಪೃಶ್ಯರನ್ನು ಸಹಿಸಿಕೊಳ್ಳದ ಮೂಲಭೂತವಾದಿಗಳ ವಿರುದ್ಧ ಛಿದ್ರಗೊಂಡಿವ ದಲಿತ ಸಮುದಾಯಗಳು ಒಗ್ಗಾಟ್ಟಾಗಿ ‘ಅಂಬೇಡ್ಕರ್ ಹಾದಿಯೇ ಅಂತಿಮ’ ಎಂಬ ಸತ್ಯವನ್ನು ಅರಿಯಬೇಕಿದೆ.