<p>ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಕಂಪನಿಗಳು ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿಯನ್ನು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತ ಎಷ್ಟು ದಿನ ನಷ್ಟ ಭರಿಸಲು ಸಾಧ್ಯ ಎಂಬುದರ ಬಗ್ಗೆ ಅವಲೋಕನ ನಡೆಸಬೇಕಾಗುತ್ತದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ಹೇಳಿದ್ದಾರೆ.</p>.<p>‘ಹಾಗಾದರೆ, ಶೀಘ್ರದಲ್ಲಿ ಇಂಧನ ದರ ಹೆಚ್ಚಳವಾಗುತ್ತದೆಯೇ’ ಎಂಬ ಪ್ರಶ್ನೆಗೆ ಉತ್ತರಿಸಲು ಸಚಿವರು ನಿರಾಕರಿಸಿದ್ದಾರೆ. ಇಂಧನ ಮಾರಾಟ ದರ ಬದಲಾಗದೆ ಇದ್ದರೆ, ಹಣಕಾಸಿನ ಒತ್ತಡ ಸೃಷ್ಟಿಯಾಗುತ್ತದೆ ಎಂಬುದನ್ನು ಸಚಿವರು ಒಪ್ಪಿದ್ದಾರೆ.</p>.<p>ದೇಶದಲ್ಲಿ ಎರಡು ತಿಂಗಳಿಗೆ ಸಾಕಾಗುವಷ್ಟು ಇಂಧನ ದಾಸ್ತಾನು ಇದೆ. ಜಾಗತಿಕ ಮಟ್ಟದಲ್ಲಿ ಇಂಧನ ಸಾಗಣೆಗೆ ಅಡ್ಡಿ ಉಂಟಾಗಿದ್ದರೂ, ದೇಶದಲ್ಲಿ ಇಂಧನ ಕೊರತೆ ಆಗಿಲ್ಲ. ಕಚ್ಚಾ ತೈಲ ಬೆಲೆ ಏರಿಕೆ ಮುಂದುವರಿದರೆ ಮತ್ತು ಇಂಧನ ಮಾರಾಟ ದರ ಬದಲಾಗದಿದ್ದರೆ, ತೈಲೋತ್ಪನ್ನಗಳ ಮಾರಾಟ ಕಂಪನಿಗಳು ಒಂದೇ ತ್ರೈಮಾಸಿಕದಲ್ಲಿ ₹1 ಲಕ್ಷ ಕೋಟಿಯಷ್ಟು ನಷ್ಟ ಕಾಣಬಹುದು ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಆಯೋಜಿಸಿದ್ದ ವ್ಯಾಪಾರ ಶೃಂಗಸಭೆಯಲ್ಲಿ ಮಂಗಳವಾರ ಹೇಳಿದ್ದಾರೆ.</p>.<p>ದೇಶದಲ್ಲಿ 45 ದಿನಕ್ಕೆ ಆಗುವಷ್ಟು ಎಲ್ಪಿಜಿ ಸಂಗ್ರಹ ಇದೆ. ಈ ಮೊದಲು ಪ್ರತಿ ದಿನ 36 ಸಾವಿರ ಟನ್ ಎಲ್ಪಿಜಿ ದೇಶದಲ್ಲಿ ಉತ್ಪಾದನೆ ಆಗುತ್ತಿತ್ತು. ಅದು ಈಗ 54 ಸಾವಿರ ಟನ್ಗೆ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.</p>.<p>ಪ್ರಧಾನಿಯವರ ಹೇಳಿಕೆ ಬಹಳ ದೂರದೃಷ್ಟಿಯಿಂದ ಕೂಡಿದೆ. ಇದು ಭವಿಷ್ಯದತ್ತ ನೋಡುತ್ತದೆ. ಈ ಯುದ್ಧ ಮುಂದುವರಿದರೆ, ಹಣಕಾಸಿನ ಒತ್ತಡವನ್ನು ಕಡಿಮೆ ಮಾಡಲು ವಿವಿಧ ಕ್ರಮಗಳ ಬಗ್ಗೆ ಯೋಚಿಸಲು ಪ್ರಾರಂಭಿಸಬೇಕಾಗುತ್ತದೆ. ಅಲ್ಲದೆ, ಕೆಲವು ಚಟುವಟಿಕೆಗಳನ್ನು ಮೊಟಕುಗೊಳಿಸಬೇಕಾಗುತ್ತದೆ. ಇದರ ಅರ್ಥ ಲಾಕ್ಡೌನ್ ಅಲ್ಲ ಎಂದು ಹೇಳಿದ್ದಾರೆ.</p>.<p>ದೇಶದ ಪ್ರತಿ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಇದೆ. ಎಲ್ಲಿಯೂ ಕೊರತೆ ಉಂಟಾಗಿಲ್ಲ. </p> <p>-ಎಲ್ಪಿಜಿ ಪೂರೈಕೆ ಸಹ ಸಾಕಷ್ಟಿದೆ ಹರದೀಪ್ ಸಿಂಗ್ ಪುರಿ ಕೇಂದ್ರ ಪೆಟ್ರೋಲಿಯಂ ಸಚಿವ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಕಂಪನಿಗಳು ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿಯನ್ನು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತ ಎಷ್ಟು ದಿನ ನಷ್ಟ ಭರಿಸಲು ಸಾಧ್ಯ ಎಂಬುದರ ಬಗ್ಗೆ ಅವಲೋಕನ ನಡೆಸಬೇಕಾಗುತ್ತದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ಹೇಳಿದ್ದಾರೆ.</p>.<p>‘ಹಾಗಾದರೆ, ಶೀಘ್ರದಲ್ಲಿ ಇಂಧನ ದರ ಹೆಚ್ಚಳವಾಗುತ್ತದೆಯೇ’ ಎಂಬ ಪ್ರಶ್ನೆಗೆ ಉತ್ತರಿಸಲು ಸಚಿವರು ನಿರಾಕರಿಸಿದ್ದಾರೆ. ಇಂಧನ ಮಾರಾಟ ದರ ಬದಲಾಗದೆ ಇದ್ದರೆ, ಹಣಕಾಸಿನ ಒತ್ತಡ ಸೃಷ್ಟಿಯಾಗುತ್ತದೆ ಎಂಬುದನ್ನು ಸಚಿವರು ಒಪ್ಪಿದ್ದಾರೆ.</p>.<p>ದೇಶದಲ್ಲಿ ಎರಡು ತಿಂಗಳಿಗೆ ಸಾಕಾಗುವಷ್ಟು ಇಂಧನ ದಾಸ್ತಾನು ಇದೆ. ಜಾಗತಿಕ ಮಟ್ಟದಲ್ಲಿ ಇಂಧನ ಸಾಗಣೆಗೆ ಅಡ್ಡಿ ಉಂಟಾಗಿದ್ದರೂ, ದೇಶದಲ್ಲಿ ಇಂಧನ ಕೊರತೆ ಆಗಿಲ್ಲ. ಕಚ್ಚಾ ತೈಲ ಬೆಲೆ ಏರಿಕೆ ಮುಂದುವರಿದರೆ ಮತ್ತು ಇಂಧನ ಮಾರಾಟ ದರ ಬದಲಾಗದಿದ್ದರೆ, ತೈಲೋತ್ಪನ್ನಗಳ ಮಾರಾಟ ಕಂಪನಿಗಳು ಒಂದೇ ತ್ರೈಮಾಸಿಕದಲ್ಲಿ ₹1 ಲಕ್ಷ ಕೋಟಿಯಷ್ಟು ನಷ್ಟ ಕಾಣಬಹುದು ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಆಯೋಜಿಸಿದ್ದ ವ್ಯಾಪಾರ ಶೃಂಗಸಭೆಯಲ್ಲಿ ಮಂಗಳವಾರ ಹೇಳಿದ್ದಾರೆ.</p>.<p>ದೇಶದಲ್ಲಿ 45 ದಿನಕ್ಕೆ ಆಗುವಷ್ಟು ಎಲ್ಪಿಜಿ ಸಂಗ್ರಹ ಇದೆ. ಈ ಮೊದಲು ಪ್ರತಿ ದಿನ 36 ಸಾವಿರ ಟನ್ ಎಲ್ಪಿಜಿ ದೇಶದಲ್ಲಿ ಉತ್ಪಾದನೆ ಆಗುತ್ತಿತ್ತು. ಅದು ಈಗ 54 ಸಾವಿರ ಟನ್ಗೆ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.</p>.<p>ಪ್ರಧಾನಿಯವರ ಹೇಳಿಕೆ ಬಹಳ ದೂರದೃಷ್ಟಿಯಿಂದ ಕೂಡಿದೆ. ಇದು ಭವಿಷ್ಯದತ್ತ ನೋಡುತ್ತದೆ. ಈ ಯುದ್ಧ ಮುಂದುವರಿದರೆ, ಹಣಕಾಸಿನ ಒತ್ತಡವನ್ನು ಕಡಿಮೆ ಮಾಡಲು ವಿವಿಧ ಕ್ರಮಗಳ ಬಗ್ಗೆ ಯೋಚಿಸಲು ಪ್ರಾರಂಭಿಸಬೇಕಾಗುತ್ತದೆ. ಅಲ್ಲದೆ, ಕೆಲವು ಚಟುವಟಿಕೆಗಳನ್ನು ಮೊಟಕುಗೊಳಿಸಬೇಕಾಗುತ್ತದೆ. ಇದರ ಅರ್ಥ ಲಾಕ್ಡೌನ್ ಅಲ್ಲ ಎಂದು ಹೇಳಿದ್ದಾರೆ.</p>.<p>ದೇಶದ ಪ್ರತಿ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಇದೆ. ಎಲ್ಲಿಯೂ ಕೊರತೆ ಉಂಟಾಗಿಲ್ಲ. </p> <p>-ಎಲ್ಪಿಜಿ ಪೂರೈಕೆ ಸಹ ಸಾಕಷ್ಟಿದೆ ಹರದೀಪ್ ಸಿಂಗ್ ಪುರಿ ಕೇಂದ್ರ ಪೆಟ್ರೋಲಿಯಂ ಸಚಿವ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>