ದೇಶದ ಅರ್ಥ ವ್ಯವಸ್ಥೆಯಲ್ಲಿ ಹೆಚ್ಚಿನ ಹಣದುಬ್ಬರ ಹಾಗೂ ಹೆಚ್ಚಿನ ನಿರುದ್ಯೋಗ ಇದೆ. ಇದನ್ನು ಸರಿಪಡಿಸಲು, ಬಹಳ ಜಾಗರೂಕವಾಗಿ ನಿಯಮಗಳನ್ನು ರೂಪಿಸಬೇಕು. ಎರಡು ವರ್ಷಗಳಲ್ಲಿ ಕುಟುಂಬಗಳ ತಲಾವಾರು ಆದಾಯ ಇಳಿಕೆ ಆಗಿದೆ. ಇದೇ ಸಂದರ್ಭದಲ್ಲಿ ಹಣದುಬ್ಬರ ದರವು ಶೇ 5ರಷ್ಟು ಇದೆ. ಉದ್ಯೋಗ ಸೃಷ್ಟಿಸುವುದು, ಸಣ್ಣ ಉದ್ದಿಮೆಗಳಿಗೆ ನೆರವು ಒದಗಿಸುವುದು, ಉತ್ಪಾದಕತೆ ಹೆಚ್ಚಿಸುವುದು ಈಗಿನ ದೊಡ್ಡ ಸವಾಲುಗಳು ಎಂದು ಅವರು ಹೇಳಿದ್ದಾರೆ.