‘ಮೂಲಸೌಕರ್ಯ ವಲಯವು ಆರ್ಥಿಕತೆಯ ಬೆಳವಣಿಗೆಯ ಚಾಲಕ ಶಕ್ತಿ. ಮೂಲಸೌಕರ್ಯ ವಲಯದ ಕೆಲವು ದೊಡ್ಡ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಆರ್ಥಿಕ ಬೆಳವಣಿಗೆಗೆ ವೇಗ ನೀಡಬಹುದು. ಕೃಷಿ ವಲಯದಲ್ಲಿನ ಇತ್ತೀಚಿನ ಸುಧಾರಣೆಗಳಿಂದಾಗಿ ಹೊಸ ಅವಕಾಶಗಳು ತೆರೆದುಕೊಂಡಿವೆ. ಕೃಷಿ ವಲಯದ ಅದೃಷ್ಟ ಖುಲಾಯಿಸಿದೆ. ಜಾಗತಿಕ ಪೂರೈಕೆ ವ್ಯವಸ್ಥೆಯಲ್ಲಿ ನಮ್ಮ ಭಾಗವಹಿಸುವಿಕೆ ಶೇ 1ರಷ್ಟು ಹೆಚ್ಚಳವಾದರೂ ಅದರಿಂದ ದೇಶದ ತಲಾ ಆದಾಯದ ಮಟ್ಟದಲ್ಲಿ ಶೇ 1ಕ್ಕಿಂತಲೂ ಹೆಚ್ಚಿನ ಏರಿಕೆ ಸಾಧ್ಯವಾಗಲಿದೆ’ ಎಂದು ಅವರು ಹೇಳಿದರು.