ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರವು ನೀಡಲು ಸಚಿವೆಗೆ ಮನವಿ

Last Updated 21 ಏಪ್ರಿಲ್ 2020, 17:51 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊವಿಡ್‌–19’ ಪಿಡುಗಿನಿಂದಾಗಿ ತೀವ್ರ ಬಿಕ್ಕಟ್ಟು ಎದುರಿಸುತ್ತಿರುವ ಒಳ ಉಡುಪು ತಯಾರಿಸುವ ಸಣ್ಣ ಉದ್ದಿಮೆಗಳ (ಎಂಎಸ್‌ಎಂಇ) ನೆರವಿಗೆ ಬರಬೇಕು ಎಂದು ಕರ್ನಾಟಕ ಇನ್ನರ್‌ವೇರ್‌ ಅಸೋಸಿಯೇಷನ್‌, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮನವಿ ಮಾಡಿಕೊಂಡಿದೆ.

ಕಡಿಮೆ ಬಡ್ಡಿ ದರಕ್ಕೆ ಹೆಚ್ಚುವರಿ ಸಾಲ, 6 ತಿಂಗಳವರೆಗೆ ಬ್ಯಾಂಕ್‌ ಬಡ್ಡಿ ಪಾವತಿ, ಸಿಬ್ಬಂದಿಯ ಪಿಎಫ್‌, ಇಎಸ್‌ಐ ವಂತಿಗೆ ಪಾವತಿ ಮತ್ತು ವಿದ್ಯುತ್‌ ಬಿಲ್‌ ಪಾವತಿಗೆ ವಿನಾಯ್ತಿ ನೀಡಬೇಕು. ಬಾಡಿಗೆ ದರದಲ್ಲಿ ಶೇ 50ರಷ್ಟು ಕಡಿತ, ವೇತನ ಸಬ್ಸಿಡಿ ಮತ್ತಿತರ ಬೇಡಿಕೆ ಈಡೇರಿಸಬೇಕು ಎಂದು ಸಂಘವು ಪತ್ರ ಬರೆದು ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT