ನವದೆಹಲಿ: ‘ಬಡ್ಡಿದರ ಹೆಚ್ಚಳವು ವಾಹನ ಬೇಡಿಕೆಯ ಮೇಲೆ ಇನ್ನೂ ಪರಿಣಾಮ ಬೀರಿಲ್ಲ. ಆದರೆ, ಸೆಮಿಕಂಡಕ್ಟರ್ ಕೊರತೆಯು ನಿವಾರಣೆ ಆದ ಬಳಿಕ ಮತ್ತು ತಯಾರಿಕೆ ಸಹಜ ಸ್ಥಿತಿಗೆ ಮರಳಿದ ನಂತರ ಬೇಡಿಕೆಯ ನಿಜವಾದ ಚಿತ್ರಣ ಸಿಗಲಿದೆ’ ಎಂದು ಮಾರುತಿ ಸುಜುಕಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ.