ಬೆಂಗಳೂರು: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧೀನದಲ್ಲಿ ಬರುವ ಪೆಟ್ರೋಲ್ ಉಳಿತಾಯ ಸಂಶೋಧನಾ ಸಂಸ್ಥೆಯು (ಪಿಸಿಆರ್ಎ), ಇಂಧನ ಉಳಿತಾಯದ ಬಗ್ಗೆ ಜನಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಂಡಿದೆ.
ತೈಲ ಮತ್ತು ಅನಿಲ ಸಂರಕ್ಷಣೆ, ಮನೆ ಬಳಕೆಯ ಎಲ್ಪಿಜಿ, ಕೃಷಿ, ಸಾರಿಗೆ ಮತ್ತು ಕೈಗಾರಿಕಾ ವಲಯದಲ್ಲಿ ಇಂಧನ ಉಳಿತಾಯದ ಬಗ್ಗೆ ಬಳಕೆದಾರರಿಗೆ ಸಲಹೆ ನೀಡುವುದು ಈ ಸಂಚಾರಿ ವಾಹನ ಪ್ರಚಾರ ಕಾರ್ಯಕ್ರಮದ ಉದ್ದೇಶವಾಗಿದೆ. ಈ ವಾಹನವು 75 ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಲಿದೆ.