ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ನಿಷ್ಠರ ಸ್ಥಿತಿ!

Last Updated 5 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮುಕ್ಕಾಲು ಕರ್ನಾಟಕಕ್ಕೆ ಅಪರಿಚಿತರಾಗಿರುವ ಸಚಿವ ರಮಾನಾಥ ರೈ, ಮುಕ್ಕಾಲು ಭಾರತಕ್ಕೆ ಪರಿಚಿತರಾಗಿರುವ ಜನಾರ್ದನ ಪೂಜಾರಿ ಅವರನ್ನು ಅವಹೇಳನ ಮಾಡಿದರಂತೆ. ಹಾಗಂತ ಸ್ವತಃ ಪೂಜಾರಿಯವರೇ ವೇದಿಕೆ ಮೇಲೆ ಕಣ್ಣೀರು ಸುರಿಸಿದ್ದರು.

ಈ ಘಟನೆ ಮರೆಯುವ ಮುನ್ನ, ಮಂಗಳೂರಿನಲ್ಲಿ ತನ್ನ ಮಗನ ವಯಸ್ಸಿನ ರಾಹುಲ್‌ ಗಾಂಧಿ ಎದುರು ‘ನನ್ನನ್ನು ಕಡೆಗಣಿಸಲಾಗುತ್ತಿದೆ’ ಎಂದು ಪೂಜಾರಿ ಕಣ್ಣೀರು ಸುರಿಸಿದ ಪ್ರಸಂಗ ಜರುಗಿದೆ.

ರಾಜಕೀಯದಲ್ಲಿ ಭಾವುಕತೆ, ಮನುಷ್ಯತ್ವ ಸತ್ತು ಸಮಾಧಿಯಾಗಿದೆ. ಅಧಿಕಾರ, ಹಣ ಮಾತ್ರ ಜೀವಂತವಾಗಿದೆ. ಇಲ್ಲಿ ಯಾರ ನೋವಿಗೂ ಯಾರೂ ಸ್ಪಂದಿಸುವುದಿಲ್ಲ. ‘ಭ್ರಷ್ಟ ಕಾಂಗ್ರೆಸಿಗರಿಗಾಗಿ ವಿಶೇಷ ಜೈಲು ಕಟ್ಟಿಸುತ್ತೇನೆ’ಎಂದು ಹೇಳಿದ್ದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿ, ಇಂದಿರಾ ಗಾಂಧಿ ಅವರನ್ನು ಹಿಗ್ಗಾಮುಗ್ಗಾ ನಿಂದಿಸಿದ್ದ ಇಬ್ರಾಹಿಂ ಅವರನ್ನು ಎಂ.ಎಲ್‌.ಸಿ. ಮಾಡಿ, ರಕ್ತದ ಕಣ ಕಣದಲ್ಲಿ ಕಾಂಗ್ರೆಸ್‌ ತುಂಬಿಕೊಂಡಿರುವ ಪೂಜಾರಿ ಅವರನ್ನು ಕಡೆಗಣಿಸಿದ್ದು ಸರಿಯಲ್ಲ.

ಅಶೋಕಕುಮಾರ ಅರ್ಕಸಾಲಿ, ಕಲಘಟಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT