ರಾಜಕೀಯದಲ್ಲಿ ಭಾವುಕತೆ, ಮನುಷ್ಯತ್ವ ಸತ್ತು ಸಮಾಧಿಯಾಗಿದೆ. ಅಧಿಕಾರ, ಹಣ ಮಾತ್ರ ಜೀವಂತವಾಗಿದೆ. ಇಲ್ಲಿ ಯಾರ ನೋವಿಗೂ ಯಾರೂ ಸ್ಪಂದಿಸುವುದಿಲ್ಲ. ‘ಭ್ರಷ್ಟ ಕಾಂಗ್ರೆಸಿಗರಿಗಾಗಿ ವಿಶೇಷ ಜೈಲು ಕಟ್ಟಿಸುತ್ತೇನೆ’ಎಂದು ಹೇಳಿದ್ದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿ, ಇಂದಿರಾ ಗಾಂಧಿ ಅವರನ್ನು ಹಿಗ್ಗಾಮುಗ್ಗಾ ನಿಂದಿಸಿದ್ದ ಇಬ್ರಾಹಿಂ ಅವರನ್ನು ಎಂ.ಎಲ್.ಸಿ. ಮಾಡಿ, ರಕ್ತದ ಕಣ ಕಣದಲ್ಲಿ ಕಾಂಗ್ರೆಸ್ ತುಂಬಿಕೊಂಡಿರುವ ಪೂಜಾರಿ ಅವರನ್ನು ಕಡೆಗಣಿಸಿದ್ದು ಸರಿಯಲ್ಲ.