ಕೆಐಒಸಿಎಲ್ ಲಾಭ ₹ 20.71 ಕೋಟಿ
ಬೆಂಗಳೂರು: ಕುದುರೆಮುಖ ಕಬ್ಬಿಣ ಅದಿರು ಕಂಪನಿ ಲಿಮಿಟೆಡ್ (ಕೆಐಒಸಿಎಲ್), 2019–20ನೇ ಹಣಕಾಸು ವರ್ಷದ ಅರ್ಧ ವಾರ್ಷಿಕ ಹಣಕಾಸು ಸಾಧನೆ ಪ್ರಕಟಿಸಿದ್ದು, ₹ 1,012.71 ಕೋಟಿ ವರಮಾನ ಗಳಿಸಿದೆ.
ಹಿಂದಿನ ವರ್ಷದ ₹ 875.42 ಕೋಟಿ ವರಮಾನಕ್ಕೆ ಹೋಲಿಸಿದರೆ ಈ ಬಾರಿ ಶೇ 15.68ರಷ್ಟು ಏರಿಕೆ ದಾಖಲಿಸಿದೆ. ನಿವ್ವಳ ಲಾಭವು ₹ 20.71 ಕೋಟಿಗಳಷ್ಟಾಗಿದೆ. ವರ್ಷದ ಹಿಂದಿನ ನಿವ್ವಳ ಲಾಭವು ₹ 45.89 ಕೋಟಿಗಳಷ್ಟಿತ್ತು.
‘ಹೊಸ ಮಾರುಕಟ್ಟೆಯಾದ ಮಧ್ಯಪ್ರಾಚ್ಯದ ದೇಶಗಳಿಗೆ ಉಕ್ಕಿನ ಉಂಡೆಗಳನ್ನು ರಫ್ತು ಮಾಡಿದ್ದರಿಂದ ವರಮಾನದಲ್ಲಿ ಹೆಚ್ಚಳ ಉಂಟಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಉಕ್ಕು ಮತ್ತು ಉಕ್ಕಿನ ಉಂಡೆಗಳ ಬೆಲೆ ತಗ್ಗಿರುವುದರಿಂದ ಲಾಭದ ಪ್ರಮಾಣ ಕಡಿಮೆಯಾಗಿದೆ’ ಎಂದು ಹೇಳಿದ್ದಾರೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಂ. ವಿ. ಸುಬ್ಬರಾವ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.