ದಾವಣಗೆರೆ: ಕಾಂಗ್ರೆಸ್ ಜನಾಶೀರ್ವಾದ ಸಭೆಯ ಬಳಿಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇರವಾಗಿ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿವಾಸಕ್ಕೆ ತೆರಳಿದರು.ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ ಅಭಿಜಿತ್ ಜಿ.ಶಾಮನೂರು ಹಾಗೂ ಸ್ವಾತಿ ದಂಪತಿಗೆ ರಾಹುಲ್ ಶುಭ ಕೋರಿದರು. ಬಿಳಿ ಹೋಳಿಗೆ ಪಲ್ಯ ಸವಿದ ರಾಹುಲ್: ರಾಹುಲ್ ಗಾಂಧಿ ಅವರಿಗೆ ಸಚಿವರ ಮನೆಯಲ್ಲಿ ತರಹೇವಾರಿ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು. ಆದರೂ ರಾಹುಲ್ ಬಿಳಿ ಹೋಳಿಗೆ, ಪಲ್ಯ, ಸ್ವಲ್ಪ ಅನ್ನಸಾಂಬಾರ್ ಸವಿದರು. ಬಳಿಕ ಶಾಮನೂರು ಕುಟಂಬ ಸದಸ್ಯರು ರಾಹುಲ್ ಜತೆ ಫೋಟೊ ತೆಗೆಸಿಕೊಂಡರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವರು ಸಚಿವರ ಮನೆಯಲ್ಲಿ ಉಪಸ್ಥಿತರಿದ್ದರು. ನಂತರ ಎಲ್ಲರೂ ಬಾಪೂಜಿ ಅತಿಥಿಗೃಹಕ್ಕೆ ತೆರಳಿ ಅಲ್ಲಿಯೇ ವಾಸ್ತವ್ಯ ಹೂಡಿದರು.