ಹೈದರಾಬಾದ್: ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಒಳಗೊಂಡ ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ದಕ್ಷಿಣ ಮಧ್ಯ ವಲಯ ಇಲ್ಲಿಯವರೆಗೆ ₹ 2,700 ಕೋಟಿ ಪ್ರೀಮಿಯಂನ 15.50 ಲಕ್ಷ ಪಾಲಿಸಿಗಳನ್ನು ಮಾರಾಟ ಮಾಡಿ ದಾಖಲೆ ಮಾಡಿದೆ.
ವಿಶಿಷ್ಟ ಸಾಧನೆ ಮಾಡಿದ, 3,300 ಮಾರಾಟದ ಅಧಿಕಾರಿಗಳನ್ನು ಇಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
‘ವಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಭಾರಿ ಸಂಖ್ಯೆಯ ಅಧಿಕಾರಿಗಳು ಭಾಗವಹಿಸಿದ್ದಾರೆ’ ಎಂದು ವಲಯ ವ್ಯವಸ್ಥಾಪಕ ಟಿ. ಸಿ. ಸುಶೀಲ್ ಕುಮಾರ್ ಹೇಳಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹೇಮಂತ್ ಭಾರ್ಗವ್ ಅವರು ಸಭೆಯಲ್ಲಿ ಭಾಗವಹಿಸಿದ್ದರು.
‘ವಿಶಿಷ್ಟ ಪಿಂಚಣಿ ಯೋಜನೆಯಾದ ‘ಜೀವನ ಶಾಂತಿ’ಗೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ವಿವಿಧ ಪಾಲಿಸಿಗಳ ಪ್ರಯೋಜನವು ಗ್ರಾಹಕರ ಅಗತ್ಯಗಳನ್ನು ಈಡೇರಿಸುವ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು’ ಎಂದರು.