ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಭಾನುವಾರ) ಬೆಂಗಳೂರಿಗೆ ಆಗಮಿಸುತ್ತಿದ್ದು, ಟ್ವಿಟರ್ನಲ್ಲಿ ಪ್ರಧಾನಿಗೆ ಮೋದಿ ಅವರಿಗೆ ಕರ್ನಾಟಕ ನಂ–1 ರಾಜ್ಯಕ್ಕೆ ಸ್ವಾಗತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಶುಭಕೋರಿದ್ದರು. ಇದಕ್ಕೆ ಬಿ.ಎಸ್. ಯಡಿಯೂರಪ್ಪ ಟ್ವಿಟರ್ನಲ್ಲಿ ತಿರುಗೇಟು ನೀಡಿದ್ದಾರೆ.
‘ಹೂಡಿಕೆ, ಸಂಶೋಧನಾ ಕ್ಷೇತ್ರ, ಅಭಿವೃದ್ಧಿ ನೀತಿಗಳನ್ನು ಒಳಗೊಂಡಂತೆ ಪ್ರಮುಖ ಕ್ಷೇತ್ರಗಳಲ್ಲಿ ನಮ್ಮ ರಾಜ್ಯ ಉತ್ತಮ ಸಾಧನೆ ಮಾಡಿ ಆಗ್ರಸ್ಥಾನದಲ್ಲಿದೆ(ನಂಬರ್ 1) ಕರ್ನಾಟಕದ ಯಶಸ್ಸು ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದೆ’ ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದರು.
Thanks for the welcome CM @siddaramaiah avare! Yes. Karnataka indeed has scripted several firsts - No.1 Corrupt State, 3,500+ farmer suicides, collapse of law & order, mysterious deaths of officers, transfers of honest officials, crumbling infra of Bengaluru. #KarnatakaTrustsModihttps://t.co/TXrdge4hDx