ಫಲಾನುಭವಿಗಳ ಸಂಖ್ಯೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿಯು ಅನುಮೋದನೆ ನೀಡಿದ ನಂತರ ‘ಐಒಸಿ’ಯು ಹಿರಿಯ ಅಧಿಕಾರಿಗಳ ಸಭೆ ನಡೆಸಿದೆ. ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ‘ಐಒಸಿ’ಯ ನಿರ್ದೇಶಕ (ಮಾರುಕಟ್ಟೆ) ಗುರ್ಮೀತ್ ಸಿಂಗ್ ಅವರು, ‘ದೇಶದಲ್ಲಿನ ಪ್ರತಿಯೊಂದು ಅಡುಗೆ ಮನೆಯೂ ಎಲ್ಪಿಜಿಯ ಸುಗಮ ಸಂಪರ್ಕ ಪಡೆದು ಹೊಗೆ ಮುಕ್ತವಾಗಿರಬೇಕು ಎಂಬ ಉದ್ದೇಶ ಸಾಧಿಸಲು ಎಲ್ಲರೂ ಕೈಜೋಡಿಸಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.