‘ಗ್ರಾಹಕರಿಗೆ ನಿವೃತ್ತಿ ನಂತರ ಹೆಚ್ಚು ಆದಾಯ ಬರುವ ರೀತಿಯಲ್ಲಿ ಈ ಪಾಲಿಸಿಯನ್ನು ವಿನ್ಯಾಸಗೊಳಿಸಲಾಗಿದೆ. ಸೇವಾ ನಿವೃತ್ತಿ ನಂತರದ ಬದುಕಿಗೆ ಇದು ನಿಗದಿತವಾಗಿ ಆದಾಯ ತಂದುಕೊಡುತ್ತದೆ. ಹೀಗಾಗಿ ನಿವೃತ್ತಿ ನಂತರದ ಜೀವನ ಹೆಚ್ಚು ಆರಾಮದಾಯಕವಾಗಿರುತ್ತದೆ. ವ್ಯಕ್ತಿಗಳು ದುಡಿಯುವ ಸಂದರ್ಭದಲ್ಲಿಯೇ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿವೃತ್ತಿ ನಂತರ ನಿಗದಿತ ಆದಾಯ ತಂದುಕೊಡಲಿದೆ. ಮರಣ ಪರಿಹಾರ, ಸಾಲ ಸೌಲಭ್ಯ, ಸರೆಂಡರ್ ಆಯ್ಕೆ ಸೇರಿದಂತೆ ಇನ್ನೂ ಹಲವು ಸೌಲಭ್ಯಗಳು ಇದರಲ್ಲಿ ಇವೆ’ ಎಂದು ಕಂಪನಿಯ ಮುಖ್ಯ ಮಾರುಕಟ್ಟೆ ಅಧಿಕಾರಿ ಅಲೋಕ್ ಭಾನ್ ತಿಳಿಸಿದ್ದಾರೆ.