ಬೆಂಗಳೂರು: ಹತ್ತು ವರ್ಷ ಗಳಿಂದ ಮಣಿಪಾಲ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಳಿಯ ಜ್ಯುವೆಲ್ಸ್ ಈಗ ಮುಂಭಾಗಕ್ಕೆ ಸ್ಥಳಾಂತರಗೊಂಡಿದೆ. ಹೊಸ ಕಟ್ಟಡದ ಉದ್ಘಾಟನಾ ಕಾರ್ಯಕ್ರಮಶನಿವಾರ ನಡೆಯಿತು.
‘ಹಲವು ವಿನ್ಯಾಸಗಳ ಆಭರಣಗಳ ಜೊತೆಗೆ ಕರಿ ಮಣಿ, ಬಳೆ, ನೆಕ್ಲೇಸ್, ಕರಾ ವಳಿಯ ಮಲ್ಲಿಗೆ ಮೊಗ್ಗು, ನವರತ್ನ ಉಂಗುರ, ಕೊಡಗಿನ ಜೋಮಾಲೆ , ಕೊಕ್ಕೆತಾತಿ, ಗುಂಡು ಸರ ಮುಳಿಯದ ವಿಶೇಷ’ ಎಂದು ಸಂಸ್ಥೆಯ ಮುಖ್ಯಸ್ಥ ಕೇಶವಪ್ರಸಾದ್ ಹೇಳಿದರು.
ಮಳಿಗೆಯಲ್ಲಿನ.1ರವರೆಗೆ ಚಿನ್ನೋತ್ಸವ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ. ಈ ಸಂದರ್ಭದಲ್ಲಿ ಗ್ರಾಹಕರಿಗೆ ಹಲವು ರಿಯಾಯಿತಿ ಪಡೆಯುವ ಹಾಗೂ ಉಡುಗೊರೆಗಳನ್ನು ಗೆಲ್ಲುವ ಅವಕಾಶವಿದೆ ಎಂದರು.