ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘16ನೇ ಜೆಟ್ಟಿನಲ್ಲಿ (ಚೆಟ್ಟಿನಾಡ್ ಮಂಗಳೂರು ಕಲ್ಲಿದ್ದಲು ಟರ್ಮಿನಲ್) ಸರಕು ನಿರ್ವಹಣೆ ಸಂಪೂರ್ಣ ಯಾಂತ್ರೀಕರಣಗೊಳ್ಳಲಿದೆ. ಇದಕ್ಕಾಗಿ ₹ 469 ಕೋಟಿ ವೆಚ್ಚ ಮಾಡಲಾಗಿದ್ದು, ಹಡಗಿನಿಂದ ಕಲ್ಲಿದ್ದಲನ್ನು ಗ್ರಾಹಕರ ಕೇಂದ್ರದವರೆಗೆ ತಲುಪಿಸುವ ತನಕವೂ ಯಂತ್ರವೇ ಎಲ್ಲ ಕೆಲಸ ನಿರ್ವಹಿಸಲಿದೆ’ ಎಂದರು.