ಹೊಸ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದ ಚೆಟ್ಟಿನಾಡ ಕಂಪನಿಯ ಸಮೂಹ ನಿರ್ದೇಶಕ ಚಂದ್ರಮೌಳೀಶ್ವರನ್ ವಿ., ‘ಕಲ್ಲಿದ್ದಲನ್ನು ಹಡಗಿನಿಂದ ಇಳಿಸುವುದು, ಲಾರಿ ಮತ್ತು ರೈಲ್ವೆ ವ್ಯಾಗನ್ಗಳಿಗೆ ಭರ್ತಿ ಮಾಡುವ ಪ್ರಕ್ರಿಯೆ ಸಂಪೂರ್ಣ ಯಾಂತ್ರೀಕೃತವಾಗಿದ್ದು, ಕೆಲವೇ ನಿಮಿಷಗಳಲ್ಲಿ ವ್ಯಾಗನ್ಗಳಿಗೆ ಕಲ್ಲಿದ್ದಲು ಭರ್ತಿ ಮಾಡಬಹುದಾಗಿದೆ’ ಎಂದರು.