ವಿನಾಯಿತಿ ಅವಧಿಯು 2020ರ ಆಗಸ್ಟ್ 31ರ ನಂತರ ವಿಸ್ತರಣೆ ಇಲ್ಲ ಎಂದು ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡ ತೀರ್ಮಾನದಲ್ಲಿ ತಾನು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಕೋರ್ಟ್ ಹೇಳಿದೆ. ‘ಕೇಂದ್ರವು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಕೈಗೊಳ್ಳುವ ನೀತಿ ನಿರ್ಣಯಗಳು ದುರುದ್ದೇಶ ಹೊಂದಿಲ್ಲದಿದ್ದರೆ, ಮನಸೋಇಚ್ಛೆ ತೀರ್ಮಾನ ಅಲ್ಲದಿದ್ದರೆ ಅಂಥವುಗಳನ್ನು ನ್ಯಾಯಾಂಗವು ಪರಾಮರ್ಶಿಸಲು ಆಗದು’ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ಹೇಳಿದೆ.