‘ಬ್ಯಾಂಕ್ಗಳು ಆಡಳಿತ ಮಂಡಳಿ ಮಟ್ಟದಲ್ಲಿಯೇ ಪರಿಹಾರ ಕಂಡುಕೊಳ್ಳಬಹುದಾಗಿದೆ. ಪ್ರಕರಣವನ್ನು ಹಣಕಾಸು ನಷ್ಟ ಮತ್ತು ದಿವಾಳಿ ಕಾಯ್ದೆಯಡಿ (ಐಬಿಸಿ) ಇತ್ಯರ್ಥಪಡಿಸಬೇಕೆ ಅಥವಾ ಹೊರಗಡೆಯೇ ಬಗೆಹರಿಸಿಕೊಳ್ಳಬಹುದೇ ಎನ್ನುವ ನಿರ್ಧಾರ ಕೈಗೊಳ್ಳುವ ಅಧಿಕಾರ ಬ್ಯಾಂಕ್ಗಳ ಕೈಯಲ್ಲಿದೆ’ ಎಂದು ಕಾರ್ಪೊರೇಟ್ ವ್ಯವಹಾರಗಳ ಕಾರ್ಯದರ್ಶಿ ಇಂಜೆತಿ ಶ್ರೀನಿವಾಸ್ ತಿಳಿಸಿದ್ದಾರೆ.