ಅಂತಹ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ನೀಡಿದ ಸಂಭಾವನೆಯನ್ನು ವಸೂಲು ಮಾಡಬೇಕು ಎಂದೂ ನಾರಾಯಣಮೂರ್ತಿ ಹೇಳಿದ್ದಾರೆ. ದೂರನ್ನು ಆಧರಿಸಿ ನಡೆಯುವ ತನಿಖೆಯ ವಿವರಗಳಲ್ಲಿ ಕಂಪನಿಯ ಸ್ಪರ್ಧಿಗಳಿಗೆ ಅನುಕೂಲ ಆಗುವ ಅಂಶಗಳು ಇಲ್ಲದಿದ್ದರೆ, ಅಂತಹ ವಿವರಗಳನ್ನು ಷೇರುದಾರರಿಗೆ ನೀಡುವ ವ್ಯವಸ್ಥೆಯೂ ಇರಬೇಕು ಎಂದು ಅವರು ಹೇಳಿದ್ದಾರೆ.