ನವದೆಹಲಿ: ‘ಕನಿಷ್ಠ ಬೆಂಬಲ ಬೆಲೆಯ (ಎಂಎಸ್ಪಿ) ಅಡಿ ಅಂದಾಜು 5,637 ಟನ್ ಭತ್ತವನ್ನು ಹರಿಯಾಣ ಮತ್ತು ಪಂಜಾಬ್ನ ರೈತರಿಂದ ಖರೀದಿಸಲಾಗಿದೆ. ಇನ್ನುಳಿದ ರಾಜ್ಯಗಳ ರೈತರಿಂದ ಭತ್ತ ಖರೀದಿಯು ಸೋಮವಾರದಿಂದ ಆರಂಭವಾಗಿದೆ’ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ. ಎಂಎಸ್ಪಿ ಯೋಜನೆಯ ಅಡಿ ಪ್ರತಿ ಕ್ವಿಂಟಾಲ್ ಭತ್ತಕ್ಕೆ ₹ 1,868 ಪಾವತಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.